ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಸರ್ವೆದೋಳ ಗುತ್ತು ಮಾತನಾಡಿ, ‘ಭತ್ತ, ಅಡಿಕೆ, ತೆಂಗು, ತರಕಾರಿ, ಕಾಳು ಮೆಣಸು, ಗೇರು ಕೃಷಿಯ ಜೊತೆಗೆ ಹೈನುಗಾರಿಕೆ ಮತ್ತು ಕೋಳಿ ಸಾಕಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಾಗೇಶ್ ಅವರು ಮಾದರಿ ಹಾಗೂ ಪ್ರಗತಿಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ’ ಎಂದರು.
ನಾಗೇಶ್ ಪಟ್ಟೆಮಜಲು ಅವರು ಮಾತನಾಡಿ, ‘ವಿಎನ್ಆರ್ 2233 ತಳಿಯ ಭತ್ತ ಬೆಳೆಯುವುದರಿಂದ ಉತ್ತಮ ಇಳುವರಿ ಪಡೆಯುವುದರ ಜೊತೆಗೆ ಹೈನುಗಾರಿಕೆಗೆ ಬೇಕಾದ ಉತ್ತಮ ಗುಣಮಟ್ಟದ ಬೈಹುಲ್ಲು ಅಧಿಕ ಪ್ರಮಾಣದಲ್ಲಿ ಲಭ್ಯವಾಗುತ್ತದೆ’ ಎಂದರು.