ಪೀಣ್ಯ ದಾಸರಹಳ್ಳಿ: ಟಾಟಾ ಕ್ಲಾಸ್ ಎಡ್ಜ್ ವತಿಯಿಂದ ಮುಂಬೈನಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ‘ಕ್ಲಾಸ್ ರೂಮ್ ಚಾಂಪಿಯನ್ಷಿಪ್’ ಉತ್ತಮ ಶಿಕ್ಷಕ ಸ್ಪರ್ಧೆಯಲ್ಲಿ, ದಾಸರಹಳ್ಳಿ ಹಾವನೂರು ಬಡಾವಣೆಯ ಸೌಂದರ್ಯ ಶಾಲೆಯ ಶಿಕ್ಷಕಿ ವಿದ್ಯಾ ಉದಯಕುಮಾರ್ ಅವರು ₹ 50 ಸಾವಿರ ನಗದು ಬಹುಮಾನ ಪಡೆದಿದ್ದಾರೆ.