<p><strong>ಬೆಂಗಳೂರು:</strong> ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ಹಳೆಯ ಕಟ್ಟಡ ಕೆಡುವುತ್ತಿದ್ದ ವೇಳೆ, ಅವಶೇಷಗಳ ಅಡಿ ಸಿಲುಕಿ ಸ್ಥಳೀಯರಾದ ಲಕ್ಷ್ಮಣ (60) ಮತ್ತು ಕಾರ್ಮಿಕ ಶಂಕರಪ್ಪ (35) ಗುರುವಾರ ಮೃತಪಟ್ಟಿದ್ದಾರೆ.</p>.<p>ದುರ್ಘಟನೆಯಲ್ಲಿ ರಾಯಚೂರಿನ ಮಲ್ಲಪ್ಪ ಗಾಯಗೊಂಡಿದ್ದಾರೆ. ಅವರನ್ನು ಸುಂಕದಕಟ್ಟೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.</p>.<p>‘ಕಟ್ಟಡದ ಮಾಲೀಕ ಪ್ರಭು, ಒಂದು ಅಂತಸ್ತಿನ ಹಳೆಯ ಕಟ್ಟಡವನ್ನು ಕೆಡವಿ, ಅದರ ಜಾಗದಲ್ಲಿ ಹೊಸದನ್ನು ನಿರ್ಮಿಸಲು ಯೋಜಿಸಿದ್ದರು. ಕಟ್ಟಡ ನೆಲಸಮಗೊಳಿಸುವ ಕೆಲಸಗುರುವಾರ ನಡೆದಿತ್ತು. ಸಂಜೆ ಅವಘಡ ಸಂಭವಿಸಿತು’ ಎಂದು ಸ್ಥಳೀಯರು ತಿಳಿಸಿದರು.</p>.<p>ಸ್ಥಳೀಯರ ಕರೆ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಅವಶೇಷಗಳನ್ನು ತೆರವುಗೊಳಿಸಿ, ಶವಗಳನ್ನು ಹೊರತೆಗೆದರು.</p>.<p>‘ಲಕ್ಷ್ಮಣ ಮತ್ತು ಶಂಕರಪ್ಪ ಸಿಗರೇಟ್ ಸೇದುತ್ತ, ಕಟ್ಟಡ ತೆರವು ಕಾರ್ಯಾಚರಣೆ ನೋಡುತ್ತಿದ್ದರು. ಅಚಾನಕ್ಕಾಗಿ ಅವರ ಮೇಲೆ ಗೋಡೆ ಕುಸಿದು ಮೃತಪಟ್ಟರು’ ಎಂದು ದೊಡ್ಡಬಿದರಕಲ್ಲು ವಾರ್ಡ್ನ ಪಾಲಿಕೆ ಸದಸ್ಯ ವಾಸುದೇವ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ಹಳೆಯ ಕಟ್ಟಡ ಕೆಡುವುತ್ತಿದ್ದ ವೇಳೆ, ಅವಶೇಷಗಳ ಅಡಿ ಸಿಲುಕಿ ಸ್ಥಳೀಯರಾದ ಲಕ್ಷ್ಮಣ (60) ಮತ್ತು ಕಾರ್ಮಿಕ ಶಂಕರಪ್ಪ (35) ಗುರುವಾರ ಮೃತಪಟ್ಟಿದ್ದಾರೆ.</p>.<p>ದುರ್ಘಟನೆಯಲ್ಲಿ ರಾಯಚೂರಿನ ಮಲ್ಲಪ್ಪ ಗಾಯಗೊಂಡಿದ್ದಾರೆ. ಅವರನ್ನು ಸುಂಕದಕಟ್ಟೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.</p>.<p>‘ಕಟ್ಟಡದ ಮಾಲೀಕ ಪ್ರಭು, ಒಂದು ಅಂತಸ್ತಿನ ಹಳೆಯ ಕಟ್ಟಡವನ್ನು ಕೆಡವಿ, ಅದರ ಜಾಗದಲ್ಲಿ ಹೊಸದನ್ನು ನಿರ್ಮಿಸಲು ಯೋಜಿಸಿದ್ದರು. ಕಟ್ಟಡ ನೆಲಸಮಗೊಳಿಸುವ ಕೆಲಸಗುರುವಾರ ನಡೆದಿತ್ತು. ಸಂಜೆ ಅವಘಡ ಸಂಭವಿಸಿತು’ ಎಂದು ಸ್ಥಳೀಯರು ತಿಳಿಸಿದರು.</p>.<p>ಸ್ಥಳೀಯರ ಕರೆ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಅವಶೇಷಗಳನ್ನು ತೆರವುಗೊಳಿಸಿ, ಶವಗಳನ್ನು ಹೊರತೆಗೆದರು.</p>.<p>‘ಲಕ್ಷ್ಮಣ ಮತ್ತು ಶಂಕರಪ್ಪ ಸಿಗರೇಟ್ ಸೇದುತ್ತ, ಕಟ್ಟಡ ತೆರವು ಕಾರ್ಯಾಚರಣೆ ನೋಡುತ್ತಿದ್ದರು. ಅಚಾನಕ್ಕಾಗಿ ಅವರ ಮೇಲೆ ಗೋಡೆ ಕುಸಿದು ಮೃತಪಟ್ಟರು’ ಎಂದು ದೊಡ್ಡಬಿದರಕಲ್ಲು ವಾರ್ಡ್ನ ಪಾಲಿಕೆ ಸದಸ್ಯ ವಾಸುದೇವ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>