ಶಾಸಕ ಸಿ.ಎಸ್. ಶಿವಳ್ಳಿ ಮಾತನಾಡಿ, ಕಾರ್ಯಪಡೆಗೆ ಬಂದಿರುವ ಅನುದಾನಕ್ಕೆ ಕ್ರಿಯಾ ಯೋಜನೆ ಈಗಾಗಲೇ ತಯಾರಿಸಲಾಗಿದೆ. ಖಾಸಗಿ ವ್ಯಕ್ತಿಗಳು ಕೊಳವೆ ಬಾವಿ ಕೊರೆಯಿಸಿದರೆ ನೀರು ಬರುತ್ತದೆ. ಆದರೆ, ಕಾರ್ಯಪಡೆಯ ಅನುದಾನದಲ್ಲಿ ತೋಡುವ ಕೊಳವೆ ಬಾವಿಯಲ್ಲಿ ನೀರೇ ಬರುವುದಿಲ್ಲ. ಭೂ ವಿಜ್ಞಾನಿಗಳು ಗುರುತಿಸಿದ ಸ್ಥಳದಲ್ಲಿಯೇ ಕೊಳವೆ ಬಾವಿ ತೋಡಿಸಿ, ಯಾವುದೇ ಕಾರಣಕ್ಕೂ ಅದು ವಿಫಲವಾಗಬಾರದು ಎಂದರು.