ಬೋಳಾದ ಕಾಡು:ಒಣಗಿ ನಿಂತಿರುವಮರಗಳಿಂದಾಗಿನಾಡು ಹಾಗೂ ಕಾಡಿನ ನಡುವಿನ ಅಂತರ ಕಡಿಮೆಯಾದಂತೆ ಪ್ರಾಣಿಗಳಿಗೆ ಭಾಸವಾಗುತ್ತಿದೆ. ಇದರಿಂದ ಆಹಾರ, ನೀರಿಗಾಗಿ ಜಿಂಕೆಗಳು ಅರಣ್ಯದ ಅಂಚಿನ ಗದ್ದೆ, ತೋಟಕ್ಕೆ ಬರುತ್ತಿವೆ. ಅವುಗಳ ಮೇಲೆ ನಾಯಿಗಳು ದಾಳಿ ಮಾಡುವುದು ಅಥವಾ ದಿಕ್ಕೆಟ್ಟು ಓಡುವಾಗ ವಾಹನಗಳಿಗೆ ಸಿಲುಕಿ ಬಲಿಯಾಗುತ್ತಿರುವಘಟನೆಗಳು ನಡೆಯುತ್ತಿವೆ. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯು ಖಗಮೃಗಗಳಿಗೆ ಕಾಡಿನಲ್ಲಿ ನೀರು ಸಿಗುವ ವ್ಯವಸ್ಥೆ ಮಾಡಿ, ಈ ಮೂಲಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದಾರೆ.