ಬೆಂಗಳೂರು:ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಮೈಸೂರಿನ ಕಿವುಡ ಮಕ್ಕಳ ಸಂಘದ ಸಹಯೋಗದಲ್ಲಿಸುರಕ್ಷಿತ ಶ್ರವಣ ಹಂತದ ಕುರಿತು ಅರಿವು ಮೂಡಿಸಲು ಶನಿವಾರ ‘ವಿದ್ಯುತ್’ ವಾಕಥಾನ್ ಅನ್ನು ಆಯೋಜಿಸಿತ್ತು.
ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ 60 ಜನ ಭಾಗವಹಿಸಿದ್ದರು. ಈ ವಾಕಥಾನ್ ಕಮ್ಮನಹಳ್ಳಿಯ ಜಲ್ ವಾಯುವಿಹಾರ ಸಿಗ್ನಲ್ನಿಂದ ಪ್ರಾರಂಭವಾಗಿ, ಕಮ್ಮನಹಳ್ಳಿ ಮುಖ್ಯ ರಸ್ತೆ ಮೂಲಕ ಸಂಚರಿಸಿ ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಎದುರು ಅಂತ್ಯಗೊಂಡಿತು.
ವಾಕಥಾನ್ ವೇಳೆ ಮಕ್ಕಳು ಸುರಕ್ಷಿತ ಶ್ರವಣ ಹಂತ ಹಾಗೂ ಅಧಿಕ ಶಬ್ದವನ್ನು ಆಲಿಸುವುದರಿಂದ ಆಗುವ ಪರಿಣಾಮಗಳ ಕುರಿತು ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿದರು.