2018ರಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿದ ಈ ಆರು ಶಾಸಕರು, ಪಕ್ಷಾಂತರ ನಿಷೇಧ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಗುಂಪಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಬಿಎಸ್ಪಿಯ ಈ ಶಾಸಕರ ನೆರವಿನಿಂದ ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ಗೆ ಸಾಧ್ಯವಾಗಿತ್ತು. ‘ಈ ಶಾಸಕರನ್ನು ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಭಾಗ ಎಂದು ಪರಿಗಣಿಸಲಾಗುವುದು’ ಎಂದು ಆಗ ಸ್ಪೀಕರ್ ಹೇಳಿದ್ದರು.