ಕಾಂಗ್ರೆಸ್ ಪಕ್ಷದ ಆಗ್ರಹದ ಮೇರೆಗೆ ರಾಜಸ್ಥಾನದ ಸಭಾಧ್ಯಕ್ಷರು ಅನರ್ಹತೆಯ ನೋಟಿಸ್ ನೀಡಿದ್ದರು. ಈ ನೋಟಿಸ್ಗೆ ಶುಕ್ರವಾರದೊಳಗೆ ಉತ್ತರಿಸಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ‘ಶಾಸಕಾಂಗ ಸಭೆಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಅನರ್ಹತೆಯ ನೋಟಿಸ್ ನೀಡಿದ್ದಾರೆ. ಇದು ಕಾರಣವೇ ಅಲ್ಲ. ವಿಧಾನಸಭೆ ಸಭಾಧ್ಯಕ್ಷರ ದುರುದ್ದೇಶವನ್ನು ತೋರಿಸುತ್ತದೆ. ಸಾಂವಿಧಾನಿಕ ಮಿತಿ ಮೀರದಂತೆ ಬಿಜೆಪಿ ನೋಡಿಕೊಳ್ಳಲಿದೆ’ ಎಂದರು.