<p><strong>ಆಲಿಗಡ: </strong>ಖಾಸಗಿ ಆಸ್ಪತ್ರೆಯೊಂದರ ಪ್ರವೇಶ ಶುಲ್ಕ ₹ 4 ಸಾವಿರ ಪಾವತಿಸದ ಕಾರಣಕ್ಕೆ ಸಿಬ್ಬಂದಿಯೇ ರೋಗಿಯನ್ನು ಹೊಡೆದು ಕೊಂದಿದ್ದಾರೆ ಎನ್ನಲಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.</p>.<p>ಹೊಟ್ಟೆ ನೋವಿನಿಂದಾಗಿ ಕುವಾರ್ಸಿ ಪ್ರದೇಶದ ಧೋರಾ ಬೈಪಾಸ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಬಂದ 44 ವರ್ಷದ ಸುಲ್ತಾನ್ ಖಾನ್ಗೆ ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಲಾಗಿತ್ತು. ಇದಕ್ಕಾಗಿ ₹ 4,500 ವೆಚ್ಚ ಭರಿಸಲು ಅಶಕ್ತರಾದ್ದರಿಂದ ವಾಪಸ್ ಬರಲು ಇಚ್ಛಿಸಿದರು. ಈ ಮಧ್ಯೆ ಸುಲ್ತಾನ್ಗೆ ಆಸ್ಪತ್ರೆಯವರು ಕೆಲವು ಔಷಧಿಗಳನ್ನು ನೀಡಿದ್ದರು ಅದಕ್ಕಾಗಿ ಹಣ ಪಾವತಿ ಮಾಡಲಾಗಿತ್ತು ಎನ್ನಲಾಗಿದೆ.</p>.<p>ಕೂಡಲೇ ಸಿಬ್ಬಂದಿ ಆಸ್ಪತ್ರೆಯ ಪ್ರವೇಶ ಶುಲ್ಕ ₹ 4 ಸಾವಿರ ಪಾವತಿಸಬೇಕು ಎಂದು ತಾಕೀತು ಮಾಡಿದರು. ಅಲ್ಲದೇ ಸುಲ್ತಾನ್ ಮೇಲೆ ದಾಳಿ ನಡೆಸಿ, ಮರದ ಕೋಲಿನಿಂದ ತಲೆಗೆ ಹೊಡೆದರು. ಸ್ಥಳದಲ್ಲಿಯೇ ಸುಲ್ತಾನ್ ಮೃತಪಟ್ಟರು ಎಂದು ಸಂಬಂಧಿಕರಾದ ಚಮನ್ ಖಾನ್ ತಿಳಿಸಿದ್ದಾರೆ.</p>.<p>ಮರಣೋತ್ತರ ಪರೀಕ್ಷೆಯ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅಭಿಷೇಕ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಿಗಡ: </strong>ಖಾಸಗಿ ಆಸ್ಪತ್ರೆಯೊಂದರ ಪ್ರವೇಶ ಶುಲ್ಕ ₹ 4 ಸಾವಿರ ಪಾವತಿಸದ ಕಾರಣಕ್ಕೆ ಸಿಬ್ಬಂದಿಯೇ ರೋಗಿಯನ್ನು ಹೊಡೆದು ಕೊಂದಿದ್ದಾರೆ ಎನ್ನಲಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.</p>.<p>ಹೊಟ್ಟೆ ನೋವಿನಿಂದಾಗಿ ಕುವಾರ್ಸಿ ಪ್ರದೇಶದ ಧೋರಾ ಬೈಪಾಸ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಬಂದ 44 ವರ್ಷದ ಸುಲ್ತಾನ್ ಖಾನ್ಗೆ ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಲಾಗಿತ್ತು. ಇದಕ್ಕಾಗಿ ₹ 4,500 ವೆಚ್ಚ ಭರಿಸಲು ಅಶಕ್ತರಾದ್ದರಿಂದ ವಾಪಸ್ ಬರಲು ಇಚ್ಛಿಸಿದರು. ಈ ಮಧ್ಯೆ ಸುಲ್ತಾನ್ಗೆ ಆಸ್ಪತ್ರೆಯವರು ಕೆಲವು ಔಷಧಿಗಳನ್ನು ನೀಡಿದ್ದರು ಅದಕ್ಕಾಗಿ ಹಣ ಪಾವತಿ ಮಾಡಲಾಗಿತ್ತು ಎನ್ನಲಾಗಿದೆ.</p>.<p>ಕೂಡಲೇ ಸಿಬ್ಬಂದಿ ಆಸ್ಪತ್ರೆಯ ಪ್ರವೇಶ ಶುಲ್ಕ ₹ 4 ಸಾವಿರ ಪಾವತಿಸಬೇಕು ಎಂದು ತಾಕೀತು ಮಾಡಿದರು. ಅಲ್ಲದೇ ಸುಲ್ತಾನ್ ಮೇಲೆ ದಾಳಿ ನಡೆಸಿ, ಮರದ ಕೋಲಿನಿಂದ ತಲೆಗೆ ಹೊಡೆದರು. ಸ್ಥಳದಲ್ಲಿಯೇ ಸುಲ್ತಾನ್ ಮೃತಪಟ್ಟರು ಎಂದು ಸಂಬಂಧಿಕರಾದ ಚಮನ್ ಖಾನ್ ತಿಳಿಸಿದ್ದಾರೆ.</p>.<p>ಮರಣೋತ್ತರ ಪರೀಕ್ಷೆಯ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅಭಿಷೇಕ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>