ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತಾನ್‌: ಸಂತಸವೇ ಸಂದೇಶ

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
Last Updated 18 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಥಿಂಪು : ಸಂತಸದಿಂದ ಇರಬೇಕು ಎಂಬುದೇ ಭೂತಾನ್‌ ಜನರ ಮೂಲಸತ್ವ. ಹೀಗಾಗಿ ಜಗತ್ತಿನ ದೃಷ್ಟಿಯಲ್ಲಿ ಭೂತಾನ್‌ ಎಂಬುದು ‘ಒಟ್ಟು ರಾಷ್ಟ್ರೀಯ ಸಂತಸ’ ಎಂಬ ಪರಿಕಲ್ಪನೆಯ ಸಮಾನಾರ್ಥಕ ಪದವೆನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಹೇಳಿದರು.

ರಾಯಲ್‌ ಯೂನಿವರ್ಸಿಟಿ ಆಫ್‌ ಭೂತಾನ್‌ನಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

‘ಜಗತ್ತಿನ ಯಾವುದೇ ದೇಶಕ್ಕೆ ಹೋಗಿ, ಭೂತಾನ್‌ ಎಂದ ತಕ್ಷಣ ನಿಮ್ಮ ಮನದಲ್ಲಿ ಎಂಥ ಭಾವನೆ ಮೂಡುತ್ತದೆ ಎಂದು ಕೇಳಿದರೆ, ಒಟ್ಟು ರಾಷ್ಟ್ರೀಯ ಸಂತಸ ಎಂಬ ಉತ್ತರ ಸಿಗುತ್ತದೆ. ಇದರಲ್ಲಿ ಅಚ್ಚರಿ ಪಡುವಂಥದ್ದು ಏನೂ ಇಲ್ಲ. ಏಕೆಂದರೆ ಸಂತಸದ ತಿರುಳು ಏನು ಎಂಬುದನ್ನು ಭೂತಾನ್‌ ಚೆನ್ನಾಗಿ ಅರ್ಥ ಮಾಡಿಕೊಂಡಿದೆ’ ಎಂದು ಹೇಳಿದರು.

‘ಜಗತ್ತು ಭೂತಾನ್‌ನಿಂದ ಕಲಿಯುವುದು ಸಾಕಷ್ಟಿದೆ. ಇಲ್ಲಿ ಅಭಿವೃದ್ಧಿ, ಪರಿಸರ ಹಾಗೂ ಸಂಸ್ಕೃತಿ ನಡುವೆ ಸಂಘರ್ಷ ಇಲ್ಲ. ಅವುಗಳು ಒಂದಕ್ಕೊಂದು ಪೂರಕವಾಗಿವೆ. ಇಲ್ಲಿ ಸಮಷ್ಟಿ ಪ್ರಜ್ಞೆ ಮೇಳೈಸಿದೆ’ ಎಂದು ಹೇಳಿದರು.

ಎರಡು ದಿನಗಳ ಭೇಟಿಗಾಗಿ ಶನಿವಾರ ಇಲ್ಲಿಗೆ ಬಂದಿದ್ದ ಮೋದಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ವಿಪಕ್ಷ ನಾಯಕರ ಭೇಟಿ: ಭೂತಾನ್‌ನ ವಿರೋಧ ಪಕ್ಷದ ನಾಯಕ ಡಾ.ಪೆಮಾ ಗ್ಯಾಮಶೋ ಅವರನ್ನು ಭೇಟಿ ಮಾಡಿದ ಮೋದಿ, ಹಲವಾರು ದ್ವಿ‍ಪಕ್ಷೀಯ ವಿಷಯಗಳ ಕುರಿತು ಚರ್ಚಿಸಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT