<p><strong>ಕಠ್ಮಂಡು:</strong>ನೇಪಾಳದ ರೆಸಾರ್ಟೊಂದರಲ್ಲಿ ನಾಲ್ವರು ಮಕ್ಕಳು ಸೇರಿದಂತೆ 8 ಮಂದಿ ಕೇರಳದ ಪ್ರವಾಸಿಗರು ಮಂಗಳವಾರ ಮೃತಪಟ್ಟಿದ್ದಾರೆ. ಪ್ರವಾಸಿಗರು ತಂಗಿದ್ದ ಕೊಠಡಿಯಲ್ಲಿ ಅನಿಲ ಸೋರಿಕೆ ಉಂಟಾಗಿದ್ದೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.</p>.<p>ಮೃತರು ಪೋಖ್ರಾ ಪರ್ವತಕ್ಕೆ ಪ್ರವಾಸ ತೆರಳಿದ್ದಕೇರಳದ 15 ಮಂದಿಯ ತಂಡದಲ್ಲಿದ್ದರು. ವಾಪಸಾಗುತ್ತಿದ್ದ ವೇಳೆ ಅವರು ಸೋಮವಾರ ರಾತ್ರಿ ಮಕವಾನ್ಪುರ ಜಿಲ್ಲೆಯ ದಮನ್ನಲ್ಲಿರುವ ‘ಎವರೆಸ್ಟ್ ಪನೋರಮಾ ರೆಸಾರ್ಟ್’ನಲ್ಲಿ ತಂಗಿದ್ದರು ಎಂದು ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.</p>.<p>ಅತಿಥಿಗಳು ಕೊಠಡಿ ಬೆಚ್ಚಗಿರಲೆಂದು ಗ್ಯಾಸ್ ಹೀಟರ್ ಆನ್ ಮಾಡಿದ್ದರು ಎಂದುರೆಸಾರ್ಟ್ ಮ್ಯಾನೇಜರ್ ತಿಳಿಸಿದ್ದಾರೆ.</p>.<p>‘ಒಟ್ಟು ನಾಲ್ಕು ಕೊಠಡಿಗಳನ್ನು ಅವರು ಕಾಯ್ದಿರಿಸಿದ್ದರು. ಎಂಟು ಮಂದಿ ಒಂದು ಕೊಠಡಿಯಲ್ಲಿ ತಂಗಿದ್ದು, ಉಳಿದವರು ಮತ್ತೊಂದು ಕೊಠಡಿಯಲ್ಲಿದ್ದರು. ಒಳಗಿನಿಂದ ಕೊಠಡಿಯ ಎಲ್ಲ ಕಿಟಿಕಿ ಮತ್ತು ಬಾಗಿಲುಗಳ ಚಿಲಕವನ್ನು ಹಾಕಲಾಗಿತ್ತು’ ಎಂದೂ ಮ್ಯಾನೇಜರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು:</strong>ನೇಪಾಳದ ರೆಸಾರ್ಟೊಂದರಲ್ಲಿ ನಾಲ್ವರು ಮಕ್ಕಳು ಸೇರಿದಂತೆ 8 ಮಂದಿ ಕೇರಳದ ಪ್ರವಾಸಿಗರು ಮಂಗಳವಾರ ಮೃತಪಟ್ಟಿದ್ದಾರೆ. ಪ್ರವಾಸಿಗರು ತಂಗಿದ್ದ ಕೊಠಡಿಯಲ್ಲಿ ಅನಿಲ ಸೋರಿಕೆ ಉಂಟಾಗಿದ್ದೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.</p>.<p>ಮೃತರು ಪೋಖ್ರಾ ಪರ್ವತಕ್ಕೆ ಪ್ರವಾಸ ತೆರಳಿದ್ದಕೇರಳದ 15 ಮಂದಿಯ ತಂಡದಲ್ಲಿದ್ದರು. ವಾಪಸಾಗುತ್ತಿದ್ದ ವೇಳೆ ಅವರು ಸೋಮವಾರ ರಾತ್ರಿ ಮಕವಾನ್ಪುರ ಜಿಲ್ಲೆಯ ದಮನ್ನಲ್ಲಿರುವ ‘ಎವರೆಸ್ಟ್ ಪನೋರಮಾ ರೆಸಾರ್ಟ್’ನಲ್ಲಿ ತಂಗಿದ್ದರು ಎಂದು ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.</p>.<p>ಅತಿಥಿಗಳು ಕೊಠಡಿ ಬೆಚ್ಚಗಿರಲೆಂದು ಗ್ಯಾಸ್ ಹೀಟರ್ ಆನ್ ಮಾಡಿದ್ದರು ಎಂದುರೆಸಾರ್ಟ್ ಮ್ಯಾನೇಜರ್ ತಿಳಿಸಿದ್ದಾರೆ.</p>.<p>‘ಒಟ್ಟು ನಾಲ್ಕು ಕೊಠಡಿಗಳನ್ನು ಅವರು ಕಾಯ್ದಿರಿಸಿದ್ದರು. ಎಂಟು ಮಂದಿ ಒಂದು ಕೊಠಡಿಯಲ್ಲಿ ತಂಗಿದ್ದು, ಉಳಿದವರು ಮತ್ತೊಂದು ಕೊಠಡಿಯಲ್ಲಿದ್ದರು. ಒಳಗಿನಿಂದ ಕೊಠಡಿಯ ಎಲ್ಲ ಕಿಟಿಕಿ ಮತ್ತು ಬಾಗಿಲುಗಳ ಚಿಲಕವನ್ನು ಹಾಕಲಾಗಿತ್ತು’ ಎಂದೂ ಮ್ಯಾನೇಜರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>