ಮಂಗಳವಾರ ರಾತ್ರಿ ಮಗುವಿನೊಂದಿಗೆ ನದಿಗೆ ಹಾರಿದ್ದ ಈತನನ್ನು ಹಾಗೂ ಮಗುವನ್ನು ದೇವಬಾಗ್ ಬೀಚ್ ರೆಸಾರ್ಟ್ ಸಿಬ್ಬಂದಿ ರಕ್ಷಿಸಿ, ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಬುಧವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ರಂಪಾಟ ಮಾಡಿ, ಸಿಬ್ಬಂದಿಯಿಂದ ತಪ್ಪಿಸಿಕೊಂಡು ವಿವಸ್ತ್ರನಾಗಿ ರಸ್ತೆಯಲ್ಲಿ ಓಡಿಬಂದಿದ್ದಾನೆ. ಪುನಃ ನದಿಗೆ ಹಾರಿ ಸುಮಾರು ಅರ್ಧ ಕಿಲೋಮೀಟರ್ನಷ್ಟು ದೂರದಲ್ಲಿರುವ ಮತ್ತೊಂದು ದಡಕ್ಕೆ ಈಜಿಕೊಂಡು ಹೋಗಿದ್ದಾನೆ. ಅಲ್ಲಿಂದ ಮತ್ತೆ ನದಿಗೆ ಜಿಗಿದ ಶಂಕರ, ಈಜುತ್ತ ಬಂದು ನದಿಯ ಮಧ್ಯಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರ ಸೇತುವೆಯ ಕಂಬದ ಕಟ್ಟೆಯಲ್ಲಿ ಕುಳಿತುಕೊಂಡಿದ್ದಾನೆ. ಸ್ಥಳೀಯರು ಎಷ್ಟೇ ಕೂಗಿ ಕರೆದರೂ ವಾಪಸ್ ಬರಲು ಒಪ್ಪಲಿಲ್ಲ. ಬದಲಾಗಿ ಗುಪ್ತಾಂಗಕ್ಕೆ ದಾರ ಬಿಗಿದುಕೊಂಡು ಮತ್ತೆ ನದಿಗೆ ಹಾರಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದರು.