ಬೆಂಗಳೂರು: ಬಜೆಟ್ ಅಧಿವೇಶನ ಮುಗಿಯುವವರೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ‘ಜನತಾ ದರ್ಶನ’ ಇರುವುದಿಲ್ಲ.
ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ನಿತ್ಯ 400ರಿಂದ 700 ಜನರು ಬರುತ್ತಿದ್ದಾರೆ. ಅಷ್ಟು ಜನರನ್ನು ಭೇಟಿ ಮಾಡಲು ಮುಂದಾದರೆ ಬಜೆಟ್ ಸಿದ್ಧತೆ ಹಾಗೂ ದೈನಂದಿನ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಸಾರ್ವಜನಿಕರ ಭೇಟಿ ರದ್ದುಪಡಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.