<p class="title"><strong>ಸಿಂಗಪುರ (ಪಿಟಿಐ): </strong>ಗಗನಸಖಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದೆ.</p>.<p class="title">2017ರಲ್ಲಿಕೊಚ್ಚಿನ್ನಿಂದ ಸಿಂಗಪುರಕ್ಕೆ ಹೊರಟಿದ್ದ ಸ್ಕೂಟ್ ವಿಮಾನದಲ್ಲಿ ಈ ಪ್ರಕರಣ ನಡೆದಿತ್ತು. ಸಿಂಗಪುರದ ಕಾಯಂ ನಿವಾಸಿಯಾದ ಆರೋಪಿ ವಿಜಯನ್ ಮಾಥನ್ ಗೋಪಾಲ್ (39) ವಿರುದ್ಧ ಮೂರು ಪ್ರಕರಣ ದಾಖಲಾಗಿತ್ತು.</p>.<p class="title">‘ಪಾನಮತ್ತನಾಗಿದ್ದ ಆರೋಪಿ,ಮುಖವನ್ನು ಮುಟ್ಟಿ ನೀನು ತುಂಬಾ ಸುಂದರವಾಗಿದ್ದೀಯ ಎಂದು ಹೇಳಿದ್ದಲ್ಲದೇ, ತನ್ನ ಎರಡು ಕೈಗಳಿಂದ ನನ್ನ ಕೆನ್ನೆಯನ್ನು ಸವರಿದ. ನಾನು ದೂರ ಸರಿಯುತ್ತಿದ್ದಂತೆ,ನನ್ನ ಮೇಲೆ ಸಿಟ್ಟು ತೋರಬೇಡ. ಈ ವಿಮಾನಕ್ಕೆ ನಾನೇ ಬಾಸ್ ಎಂದು ಹೇಳಿ, ಅನುಚಿತವಾಗಿ ವರ್ತಿಸಿದ್ದಾನೆ’ ಎಂದು ಗಗನಸಖಿ ಆರೋಪಿಸಿದ್ದರು.</p>.<p>ವಿಮಾನ ಸಿಂಗಪುರದಲ್ಲಿ ಇಳಿಯುತ್ತಿದ್ದಂತೆ ಗಗನಸಖಿ, ಸ್ಕೂಟ್ ವಿಮಾನಯಾನ ಸಂಸ್ಥೆಗೆ ಮತ್ತು ವಿಮಾನ ನಿಲ್ದಾಣ ಪೊಲೀಸರಿಗೆ ದೂರು ಸಲ್ಲಿಸಿದ್ದರು.</p>.<p>ಜಿಲ್ಲಾ ನ್ಯಾಯಾಧೀಶರಾದ ಸಲೀನಾ ಇಶಾಕ್ ಪ್ರಕರಣದ ವಿಚಾರಣೆ ನಡೆಸಿದರು. ಆರೋಪಿಗೆ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ, ದಂಡ ವಿಧಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಸಿಂಗಪುರ (ಪಿಟಿಐ): </strong>ಗಗನಸಖಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದೆ.</p>.<p class="title">2017ರಲ್ಲಿಕೊಚ್ಚಿನ್ನಿಂದ ಸಿಂಗಪುರಕ್ಕೆ ಹೊರಟಿದ್ದ ಸ್ಕೂಟ್ ವಿಮಾನದಲ್ಲಿ ಈ ಪ್ರಕರಣ ನಡೆದಿತ್ತು. ಸಿಂಗಪುರದ ಕಾಯಂ ನಿವಾಸಿಯಾದ ಆರೋಪಿ ವಿಜಯನ್ ಮಾಥನ್ ಗೋಪಾಲ್ (39) ವಿರುದ್ಧ ಮೂರು ಪ್ರಕರಣ ದಾಖಲಾಗಿತ್ತು.</p>.<p class="title">‘ಪಾನಮತ್ತನಾಗಿದ್ದ ಆರೋಪಿ,ಮುಖವನ್ನು ಮುಟ್ಟಿ ನೀನು ತುಂಬಾ ಸುಂದರವಾಗಿದ್ದೀಯ ಎಂದು ಹೇಳಿದ್ದಲ್ಲದೇ, ತನ್ನ ಎರಡು ಕೈಗಳಿಂದ ನನ್ನ ಕೆನ್ನೆಯನ್ನು ಸವರಿದ. ನಾನು ದೂರ ಸರಿಯುತ್ತಿದ್ದಂತೆ,ನನ್ನ ಮೇಲೆ ಸಿಟ್ಟು ತೋರಬೇಡ. ಈ ವಿಮಾನಕ್ಕೆ ನಾನೇ ಬಾಸ್ ಎಂದು ಹೇಳಿ, ಅನುಚಿತವಾಗಿ ವರ್ತಿಸಿದ್ದಾನೆ’ ಎಂದು ಗಗನಸಖಿ ಆರೋಪಿಸಿದ್ದರು.</p>.<p>ವಿಮಾನ ಸಿಂಗಪುರದಲ್ಲಿ ಇಳಿಯುತ್ತಿದ್ದಂತೆ ಗಗನಸಖಿ, ಸ್ಕೂಟ್ ವಿಮಾನಯಾನ ಸಂಸ್ಥೆಗೆ ಮತ್ತು ವಿಮಾನ ನಿಲ್ದಾಣ ಪೊಲೀಸರಿಗೆ ದೂರು ಸಲ್ಲಿಸಿದ್ದರು.</p>.<p>ಜಿಲ್ಲಾ ನ್ಯಾಯಾಧೀಶರಾದ ಸಲೀನಾ ಇಶಾಕ್ ಪ್ರಕರಣದ ವಿಚಾರಣೆ ನಡೆಸಿದರು. ಆರೋಪಿಗೆ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ, ದಂಡ ವಿಧಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>