ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿದ ಮುಖಂಡ ಎಚ್.ಪಿ.ಮಹೇಶ್ ಅವರ ಮನೆಗೆ ಭೇಟಿ ನೀಡಿದ್ದರು. ಮನೆಗೆ ಬಂದ ಮುಖಂಡರನ್ನು ಆರತಿ ಮಾಡಿ ಸ್ವಾಗತಿಸಲಾಯಿತು. ಆಗ ಅವರು, ಜೇಬಿನಿಂದ ಹಣ ತೆಗೆದು ₹ 2 ಸಾವಿರ ನೋಟನ್ನು ಆರತಿ ತಟ್ಟೆಗೆ ಹಾಕಿದರು. ಕೆಲವರು ಹಣ ಹಾಕುವುದು ಬೇಡ ಎಂದು ಹೇಳಲು ಮುಂದಾದರು. ಆದರೆ ಅಷ್ಟೊತ್ತಿಗಾಗಲೇ ಹಣ ಹಾಕಿದ್ದರು.