ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಭೀತಿ: ಶವ ಸಂಸ್ಕಾರಕ್ಕೆ ಬಾರದ ಬಂಧುಗಳು!

Last Updated 17 ಜುಲೈ 2020, 14:01 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ ಜಿಲ್ಲೆ): ಪಟ್ಟಣದಲ್ಲಿ ಮೃತರಾದ ವ್ಯಕ್ತಿಯೊಬ್ಬರ ಅಂತಿಮಯಾತ್ರೆಗೆ ಸಂಬಂಧಿಕರು, ಆಪ್ತರು ಅಥವಾ ಸ್ಥಳೀಯರು ಬಾರದೆ ಕುಟುಂಬವೊಂದು ತಳ್ಳುವ ಗಾಡಿಯಲ್ಲಿ ಶವ ಸಾಗಿಸಿದ ಘಟನೆ ಗುರುವಾರ ನಡೆದಿದೆ. ಕೊರೊನಾ ಭೀತಿಯಿಂದಾಗಿ ಜನರು ನೆರವಿಗೆ ಧಾವಿಸಿಲ್ಲ ಎನ್ನಲಾಗುತ್ತಿದೆ.

ಇಲ್ಲಿನ ನಿವಾಸಿ ಸದಾಶಿವ ಹಿರಟ್ಟಿ(55) ಮೃತರು. ಸರ್ಕಾರಿ ಆಸ್ಪತ್ರೆಯ ಮುಂದೆ ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಿದ್ದರು. ಅನಾರೋಗ್ಯದಿಂದ ಗುರುವಾರ ತಡರಾತ್ರಿ ಮನೆಯಲ್ಲಿ ಮಲಗಿದಲ್ಲೇ ಮೃತರಾಗಿದ್ದರು. ಅಂತಿಮಯಾತ್ರೆಗೆ ಹೆಗಲು ಕೊಡಲು ಸ್ಥಳೀಯರು ಮುಂದೆ ಬಂದಿಲ್ಲ. ಬಂಧುಗಳಾರೂ ಬಾರದಿದ್ದರಿಂದ ಕುಟುಂಬದ ಕೆಲವರೇ ಪಟ್ಟಣದ ಹೊರವಲಯದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಗ ತಳ್ಳುಗಾಡಿಯಲ್ಲಿ ಶವ ಸಾಗಿಸುತ್ತಿದ್ದರೆ, ಮೃತರ ಪತ್ನಿ ಜೊತೆಯಲ್ಲಿ ತೆರಳಿದ್ದಾರೆ. ಸ್ಥಳೀಯರು ಮಾಡಿರುವ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ.

ವಿಡಿಯೊ ಮಾಡುತ್ತಿರುವ ಕೆಲವರು ನೆರವಿಗೆ ಬಂದಿಲ್ಲದಿರುವ ದೃಶ್ಯಗಳು ಕೂಡ ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT