ತಮ್ಮ ಫೇಸ್ಬುಕ್ ಪೇಜ್ನಲ್ಲಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ವಿಶೇಷ ವರದಿಯನ್ನು ಟ್ಯಾಗ್ ಮಾಡಿರುವ ಸಚಿವರು, ಶಿಕ್ಷಕ ಹಣಮಂತ ಕಾತರಕಿ ಮಕ್ಕಳ ಕಲಿಕೆಗೆ ಪೂರಕವಾಗುವ ವಿಡಿಯೊ, ಅಕ್ಷರ, ಚಿತ್ರ ಕಥೆ, ಅಂಕಿಗಳ ಚಿತ್ರಗಳನ್ನು ಮೊಬೈಲ್ ಮೂಲಕ ಪಾಲಕರಿಗೆ ಕಳುಹಿಸಿ, ಒಂದರಿಂದ ಮೂರನೇ ತರಗತಿ ಮಕ್ಕಳಿಗೆ ಅಕ್ಷರ ಜ್ಞಾನ ಮೂಡಿಸುವ ಕಾರ್ಯ ಮೆಚ್ಚುವಂತದು’ ಎಂದು ಬರೆದುಕೊಂಡಿದ್ದಾರೆ.