ನಗರ ಪಾಲಿಕೆ ವ್ಯಾಪ್ತಿಯ ಕುಂಬಾರ ಗುಂಡಿ, ಬಿ.ಬಿ. ರಸ್ತೆ, ವಿದ್ಯಾನಗರ, ಚಿಕ್ಕಲ್, ರಾಜೀವ್ ಗಾಂಧಿ ಬಡಾವಣೆ, ಶಾಂತಮ್ಮ ಬಡಾವಣೆ, ಬಾಪೂಜಿನಗರ ಸೇರಿ ವಿವಿಧ ಬಡಾವಣೆಗಳ 1,355 ಮನೆಗಳಿಗೆ ಹಾನಿಯಾಗಿತ್ತು. ಅವುಗಳಲ್ಲಿ 801 ಮನೆಗಳು ಸಂಪೂರ್ಣ ಕುಸಿದಿದ್ದವು. ಅಂದು ತಾತ್ಕಾಲಿಕ ಪರಿ ಹಾರವಾಗಿ ನಗರ ಪಾಲಿಕೆ ₹ 2.55 ಕೋಟಿ ಪರಿಹಾರ ಒದಗಿಸಿತ್ತು. ಸಂಪೂರ್ಣ ಹಾನಿಯಾದ ಮನೆಗಳಿಗೆ ತಲಾ ₹ 5 ಲಕ್ಷ ನೀಡಲು ತಾಲ್ಲೂಕು ಆಡಳಿತಕ್ಕೆ ಜವಾಬ್ದಾರಿ ನೀಡಲಾಗಿತ್ತು.