ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ದುಃಖ, ಮೌನ ಮತ್ತು ಮಾತೆಯನ್ನು ಕಳೆದುಕೊಂಡೆವಲ್ಲ ಎಂಬ ನೂರಾರು ಆಲೋಚನೆಗಳ ಸರಮಾಲೆ ಹರಿದಾಡುತ್ತಿದ್ದವು. ಶನಿವಾರ ಅಮ್ಮನ ಸಾವು ಖಚಿತಗೊಳ್ಳುತ್ತಿದ್ದಂತೇಯೇ ವಸತಿ ವಿದ್ಯಾರ್ಥಿಗಳು ಮಾಣಿಕ್ಯಗಿರಿಯ ಅಮ್ಮನತ್ತ ದೌಡಾಯಿಸಿದ್ದರು. ಶನಿವಾರ ರಾತ್ರಿಯಿಂದ ನಿರುತ್ಸಾಹದಲ್ಲಿದ್ದ ಎಲ್ಲರಲ್ಲಿಯೂ ಏನೆಂಬ ಆತಂಕದ ಸಾಂದರ್ಭಿಕತೆ, ನಮಗಾರು ದಿವ್ಯ ದರ್ಶನ ನೀಡುವರೆಂಬ ಪ್ರಶ್ನಾತೀತ ಆಲೋಚನೆ. ನಮ್ಮೊಂದಿಗೆ ಅಮ್ಮಳಿದ್ದಾಳೆ. ಅವಳೇ ನಮಗೆ ಸರ್ವಸ್ವ ಎಂಬ ಉತ್ಸಾಹ ಶನಿವಾರ ರಾತ್ರಿಯಿಂದಲೇ ದೂರವೇ ಸರಿದಿತ್ತು. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಸಾಮಗ್ರಿ ಬಿಟ್ಟರೆ ಎಲ್ಲವೂ ಶೂನ್ಯವೆಂಬಂತೆ ಭಾಸವಾಗುತ್ತಿತ್ತು.