ಎರಡು ದಿನಗಳ ಹಿಂದೆ ಮಂಗಲದಾಯ್ ಸಿವಿಲ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡ 14 ಮಂದಿ ರೋಗಿಗಳ ಹೆಸರನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದ್ದ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದರಿಂದ ಅವರನ್ನೇ ಬಿಡುಗಡೆ ಮಾಡಲಾಯಿತು. ಇಬ್ಬರ ಹೆಸರು ಒಂದೇ ರೀತಿ ಇದ್ದುದ್ದರಿಂದ ಮತ್ತು ಮುಖಗವುಸು ಹಾಕಿದ್ದ ಕಾರಣ ಈ ಆಚಾತುರ್ಯ ಘಟನೆ ನಡೆಯಿತು ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.