ರಸ್ತೆ ಪಕ್ಕಕ್ಕೆ ಸಸಿಗಳನ್ನು ನೆಡಲು ಮುಂದಾಗಿರುವುದು ಸ್ವಾಗತಾರ್ಹ ಆದರೆ ಮಳೆಗಾಲದಲ್ಲಿ ಸಸಿಗಳನ್ನು ನೆಟ್ಟರೆ ನೀರಿನ ಸಮಸ್ಯೆ ಕಡಿಮೆ ಇರುತ್ತದೆ. ಈಗ ಬಿಸಿಲಿನ ಝಳ ಜಾಸ್ತಿಯಾಗಿರುವುದರಿಂದ ಈಚೆಗಷ್ಟೆ ನೆಟ್ಟ ಸಸಿಗಳಿಗೆ ನೀರುಣಿಸಲು ಇತರೆ ವ್ಯವಸ್ಥೆಯನ್ನು ಸಂಬಂಧಿತ ಇಲಾಖೆಯವರು ಮಾಡಿಕೊಂಡು ಸಸಿಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಗಜೇಂದ್ರಗಡ ಗ್ರೀನ್ ಆರ್ಮಿ ತಂಡದ ಸದಸ್ಯರಾದ ರಾಜು ಇಟಗಿ, ಕಿರಣಕುಮಾರ ತಳಕವಾಡ, ಸಂಗಮೇಶ ವಸ್ತ್ರದ, ಶಿವು ಕೊಸಗಿ, ಸಂಗಮೇಶ ಬಾಗೂರ ಮನವಿ ಮಾಡಿದರು.