ಬೋಟ್ನಲ್ಲಿ ಹೆಚ್ಚುವರಿವ್ಯಕ್ತಿ ಇದ್ದಾರೆ ಎಂಬ ಮಾಹಿತಿ ಯನ್ನುಬೋಟ್ ತೂತ್ತುಕುಡಿ ಬಂದರು ಸಮೀಪಿಸಿದಾಗ ಅದರ ಸಿಬ್ಬಂದಿ ಬಂದರು ಅಧಿಕಾರಿಗಳಿಗೆ ನೀಡಿದ್ದರು. ಅಧಿಕಾರಿಗಳು ಅದೀಬ್ ಅವರ ತನಿಖೆ ನಡೆಸಿ, ಅಗತ್ಯ ದಾಖಲೆಗಳು ಇಲ್ಲದ ಕಾರಣ ವಶಕ್ಕೆ ಪಡೆದರು. ಕೇಂದ್ರದ ಸಂಸ್ಥೆಗಳ ಅಧಿಕಾರಿಗಳು ತನಿಖೆಮುಂದುವರಿಸಿದ್ದಾರೆ. ಅಬ್ದುಲ್ಲಾ ಮಾಲ್ಡೀವ್ಸ್ ಅಧ್ಯಕ್ಷರಾಗಿದ್ದಾಗ ಅವರ ಹತ್ಯೆಗೆ ಯತ್ನಿಸಿದ್ದ ಆರೋಪ ಅದೀಬ್ ಮೇಲಿದೆ.