ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಸಾಗುತ್ತಿದ್ದ ವಾಹನವನ್ನು ಪಾಕಿಸ್ತಾನದ ಉಗ್ರನೊಬ್ಬ ಸ್ಫೋಟಿಸಿದ್ದ 40 ಯೋಧರು ಮೃತಪಟ್ಟಿದ್ದರು. ಇದಾದ ಮಾರನೇ ದಿನವೇ ಶ್ರೀನಗರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಭದ್ರತಾ ಪಡೆಗಳ ಬೆಂಗಾವಲು ವಾಹನಗಳು ಸರಾಗವಾಗಿ ಸಾಗಲು ನಾಗರಿಕ ವಾಹನಗಳನ್ನು ತಡೆಯಲಾಗುವುದು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬುದು ನಿಜ. ಆದರೆ ಇದಕ್ಕಾಗಿ ಸಹಕಾರ ಅಗತ್ಯ ಎಂದು ಹೇಳಿದ್ದರು.