‘ಮಾಹಿತಿ ಆಯುಕ್ತರು ಸರ್ಕಾರದ ಸೂಚನೆಗೆ ತಕ್ಕಂತೆ ನಡೆದುಕೊಳ್ಳುವುದನ್ನು ಈ ತಿದ್ದುಪಡಿ ಖಾತ್ರಿಪಡಿಸಿದೆ.ಸಂಸತ್ತಿನಲ್ಲಿ ಈ ತಿದ್ದುಪಡಿಗಳನ್ನು ನಾವು ವಿರೋಧಿಸಿದ್ದೆವು. ಮುಂದೆಯೂ ಇದನ್ನು ವಿರೋಧಿಸುತ್ತೇವೆ. ಸಾಂವಿಧಾನಿಕ ಸಂಸ್ಥೆಗಳನ್ನು ಈ ರೀತಿ ದುರ್ಬಲಗೊಳಿಸುವುದನ್ನು ನಾವು ಖಂಡಿಸುತ್ತೇವೆ. ದೇಶದಾದ್ಯಂತ ಇರುವ ಆರ್ಟಿಐ ಕಾರ್ಯಕರ್ತರು ಈ ಕಾಯ್ದೆಯ ಮುಖಾಂತರ ಭ್ರಷ್ಟಾಚಾರವನ್ನು ಹೊರಗೆಳೆದಿದ್ದಾರೆ, ಸರ್ಕಾರದ ನೀತಿ, ಯೋಜನೆಗಳ ಪರಿಣಾಮಗಳನ್ನು ಅಳೆದಿದ್ದಾರೆ. ಆದರೆ ಈ ಸಂಸ್ಥೆ ತನ್ನ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಭಾವಿಸಿರುವ ಬಿಜೆಪಿ, ಶಾಸನದ ನಾಶಕ್ಕೆ ಮುಂದಾಗಿದೆ’ ಎಂದು ಪ್ರಕಟಣೆಯಲ್ಲಿ ಸೋನಿಯಾ ಗಾಂಧಿ ತಿಳಿಸಿದ್ದಾರೆ.