<p><strong>ನವದೆಹಲಿ(ಪಿಟಿಐ)</strong>: ‘ಆರ್ಟಿಐ ಕಾಯ್ದೆಗೆ ತಿದ್ದುಪಡಿ ತರುವ ಮುಖಾಂತರ ಮೋದಿ ಸರ್ಕಾರ ಮಾಹಿತಿ ಆಯುಕ್ತರ ಅಧಿಕಾರವನ್ನು ಮೊಟಕುಗೊಳಿಸಿದೆ. ಈ ತಿದ್ದುಪಡಿ ಆರ್ಟಿಐ ಕಾಯ್ದೆಯ ನಾಶಕ್ಕೆ ನಡೆಸುತ್ತಿರುವ ಅಂತಿಮ ದಾಳಿಯಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದರು.</p>.<p>‘ಮಾಹಿತಿ ಆಯುಕ್ತರು ಸರ್ಕಾರದ ಸೂಚನೆಗೆ ತಕ್ಕಂತೆ ನಡೆದುಕೊಳ್ಳುವುದನ್ನು ಈ ತಿದ್ದುಪಡಿ ಖಾತ್ರಿಪಡಿಸಿದೆ.ಸಂಸತ್ತಿನಲ್ಲಿ ಈ ತಿದ್ದುಪಡಿಗಳನ್ನು ನಾವು ವಿರೋಧಿಸಿದ್ದೆವು. ಮುಂದೆಯೂ ಇದನ್ನು ವಿರೋಧಿಸುತ್ತೇವೆ. ಸಾಂವಿಧಾನಿಕ ಸಂಸ್ಥೆಗಳನ್ನು ಈ ರೀತಿ ದುರ್ಬಲಗೊಳಿಸುವುದನ್ನು ನಾವು ಖಂಡಿಸುತ್ತೇವೆ. ದೇಶದಾದ್ಯಂತ ಇರುವ ಆರ್ಟಿಐ ಕಾರ್ಯಕರ್ತರು ಈ ಕಾಯ್ದೆಯ ಮುಖಾಂತರ ಭ್ರಷ್ಟಾಚಾರವನ್ನು ಹೊರಗೆಳೆದಿದ್ದಾರೆ, ಸರ್ಕಾರದ ನೀತಿ, ಯೋಜನೆಗಳ ಪರಿಣಾಮಗಳನ್ನು ಅಳೆದಿದ್ದಾರೆ. ಆದರೆ ಈ ಸಂಸ್ಥೆ ತನ್ನ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಭಾವಿಸಿರುವ ಬಿಜೆಪಿ, ಶಾಸನದ ನಾಶಕ್ಕೆ ಮುಂದಾಗಿದೆ’ ಎಂದು ಪ್ರಕಟಣೆಯಲ್ಲಿ ಸೋನಿಯಾ ಗಾಂಧಿ ತಿಳಿಸಿದ್ದಾರೆ.</p>.<p>‘ಮಾಹಿತಿ ಆಯುಕ್ತರ ಹುದ್ದೆಗೆ ನೀಡುತ್ತಿದ್ದ ಸೌಲಭ್ಯಗಳನ್ನೂ ಕಡಿತಗೊಳಿಸುವ ಮುಖಾಂತರ, ಪ್ರಾಮಾಣಿಕ ಹಿರಿಯ ಅಧಿಕಾರಿಗಳು ಈ ಹುದ್ದೆಗೆ ಬಾರದಂತೆ ಖಾತ್ರಿಪಡಿಸಲಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ)</strong>: ‘ಆರ್ಟಿಐ ಕಾಯ್ದೆಗೆ ತಿದ್ದುಪಡಿ ತರುವ ಮುಖಾಂತರ ಮೋದಿ ಸರ್ಕಾರ ಮಾಹಿತಿ ಆಯುಕ್ತರ ಅಧಿಕಾರವನ್ನು ಮೊಟಕುಗೊಳಿಸಿದೆ. ಈ ತಿದ್ದುಪಡಿ ಆರ್ಟಿಐ ಕಾಯ್ದೆಯ ನಾಶಕ್ಕೆ ನಡೆಸುತ್ತಿರುವ ಅಂತಿಮ ದಾಳಿಯಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದರು.</p>.<p>‘ಮಾಹಿತಿ ಆಯುಕ್ತರು ಸರ್ಕಾರದ ಸೂಚನೆಗೆ ತಕ್ಕಂತೆ ನಡೆದುಕೊಳ್ಳುವುದನ್ನು ಈ ತಿದ್ದುಪಡಿ ಖಾತ್ರಿಪಡಿಸಿದೆ.ಸಂಸತ್ತಿನಲ್ಲಿ ಈ ತಿದ್ದುಪಡಿಗಳನ್ನು ನಾವು ವಿರೋಧಿಸಿದ್ದೆವು. ಮುಂದೆಯೂ ಇದನ್ನು ವಿರೋಧಿಸುತ್ತೇವೆ. ಸಾಂವಿಧಾನಿಕ ಸಂಸ್ಥೆಗಳನ್ನು ಈ ರೀತಿ ದುರ್ಬಲಗೊಳಿಸುವುದನ್ನು ನಾವು ಖಂಡಿಸುತ್ತೇವೆ. ದೇಶದಾದ್ಯಂತ ಇರುವ ಆರ್ಟಿಐ ಕಾರ್ಯಕರ್ತರು ಈ ಕಾಯ್ದೆಯ ಮುಖಾಂತರ ಭ್ರಷ್ಟಾಚಾರವನ್ನು ಹೊರಗೆಳೆದಿದ್ದಾರೆ, ಸರ್ಕಾರದ ನೀತಿ, ಯೋಜನೆಗಳ ಪರಿಣಾಮಗಳನ್ನು ಅಳೆದಿದ್ದಾರೆ. ಆದರೆ ಈ ಸಂಸ್ಥೆ ತನ್ನ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಭಾವಿಸಿರುವ ಬಿಜೆಪಿ, ಶಾಸನದ ನಾಶಕ್ಕೆ ಮುಂದಾಗಿದೆ’ ಎಂದು ಪ್ರಕಟಣೆಯಲ್ಲಿ ಸೋನಿಯಾ ಗಾಂಧಿ ತಿಳಿಸಿದ್ದಾರೆ.</p>.<p>‘ಮಾಹಿತಿ ಆಯುಕ್ತರ ಹುದ್ದೆಗೆ ನೀಡುತ್ತಿದ್ದ ಸೌಲಭ್ಯಗಳನ್ನೂ ಕಡಿತಗೊಳಿಸುವ ಮುಖಾಂತರ, ಪ್ರಾಮಾಣಿಕ ಹಿರಿಯ ಅಧಿಕಾರಿಗಳು ಈ ಹುದ್ದೆಗೆ ಬಾರದಂತೆ ಖಾತ್ರಿಪಡಿಸಲಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>