<p><strong>ಮುಜಾಫರ್ನಗರ/ಮೀರಠ್:</strong>ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧನಡೆದ ಪ್ರತಿಭಟನೆ ವೇಳೆ<br />ಗಾಯಗೊಂಡವರು ಮತ್ತು ಮೃತಪಟ್ಟ ಕುಟುಂಬದ ಸದಸ್ಯರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅನಿರೀಕ್ಷಿತವಾಗಿ ಶನಿವಾರ ಭೇಟಿ ಮಾಡಿದರು.</p>.<p>ಪ್ರಿಯಾಂಕಾ ಅವರೊಂದಿಗೆ ಪಕ್ಷದ ಮುಖಂಡ ಇಮ್ರಾನ್ ಮಸೂದ್ ಅವರು ಇದ್ದರು. ‘ನಿಮ್ಮೊಂದಿಗೆ ನಾನಿದ್ದೇನೆ’ ಎಂದು ಪ್ರತಿಭಟನೆಯಲ್ಲಿ ಗಾಯಗೊಂಡವರಿಗೆ ಪ್ರಿಯಾಂಕಾ ಅಭಯ ನೀಡಿದರು.</p>.<p>‘ಜನರನ್ನು ನಿರ್ದಯವಾಗಿ ಪೊಲೀಸರು ಥಳಿಸಿದ್ದಾರೆ. ಮಕ್ಕಳು ಮತ್ತುಏಳು ತಿಂಗಳ ಗರ್ಭಿಣಿಯ ಮೇಲೆಯೂ ಹಲ್ಲೆ ನಡೆಸಲಾಗಿದೆ’ ಎಂದು ಅವರು ಆರೋಪಿಸಿದರು. ಡಿ.24ರಂದು ಕುಟುಂಬದವರ ಭೇಟಿಗೆ ಬಂದಿದ್ದ ಪ್ರಿಯಾಂಕಾ ಅವರ ಪ್ರವೇಶವನ್ನು ಪೊಲೀಸರು ನಿರಾಕರಿಸಿದ್ದರು. </p>.<p class="Subhead">ಯೋಗಿ ಟೀಕೆ (ಲಖನೌ ವರದಿ): ಪ್ರಿಯಾಂಕಾ ಗಾಂಧಿ ಅವರ ಭೇಟಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿಟೀಕೆ ಮಾಡಿದ್ದಾರೆ.</p>.<p class="Subhead">‘ಜನರಿಂದ ಪದೇ ಪದೇ ತಿರಸ್ಕೃತಗೊಂಡವರು ಸಂತ್ರಸ್ತರನ್ನು ಭೇಟಿಯಾಗಿ ಸಮಾಧಾನದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಜಾಫರ್ನಗರ/ಮೀರಠ್:</strong>ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧನಡೆದ ಪ್ರತಿಭಟನೆ ವೇಳೆ<br />ಗಾಯಗೊಂಡವರು ಮತ್ತು ಮೃತಪಟ್ಟ ಕುಟುಂಬದ ಸದಸ್ಯರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅನಿರೀಕ್ಷಿತವಾಗಿ ಶನಿವಾರ ಭೇಟಿ ಮಾಡಿದರು.</p>.<p>ಪ್ರಿಯಾಂಕಾ ಅವರೊಂದಿಗೆ ಪಕ್ಷದ ಮುಖಂಡ ಇಮ್ರಾನ್ ಮಸೂದ್ ಅವರು ಇದ್ದರು. ‘ನಿಮ್ಮೊಂದಿಗೆ ನಾನಿದ್ದೇನೆ’ ಎಂದು ಪ್ರತಿಭಟನೆಯಲ್ಲಿ ಗಾಯಗೊಂಡವರಿಗೆ ಪ್ರಿಯಾಂಕಾ ಅಭಯ ನೀಡಿದರು.</p>.<p>‘ಜನರನ್ನು ನಿರ್ದಯವಾಗಿ ಪೊಲೀಸರು ಥಳಿಸಿದ್ದಾರೆ. ಮಕ್ಕಳು ಮತ್ತುಏಳು ತಿಂಗಳ ಗರ್ಭಿಣಿಯ ಮೇಲೆಯೂ ಹಲ್ಲೆ ನಡೆಸಲಾಗಿದೆ’ ಎಂದು ಅವರು ಆರೋಪಿಸಿದರು. ಡಿ.24ರಂದು ಕುಟುಂಬದವರ ಭೇಟಿಗೆ ಬಂದಿದ್ದ ಪ್ರಿಯಾಂಕಾ ಅವರ ಪ್ರವೇಶವನ್ನು ಪೊಲೀಸರು ನಿರಾಕರಿಸಿದ್ದರು. </p>.<p class="Subhead">ಯೋಗಿ ಟೀಕೆ (ಲಖನೌ ವರದಿ): ಪ್ರಿಯಾಂಕಾ ಗಾಂಧಿ ಅವರ ಭೇಟಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿಟೀಕೆ ಮಾಡಿದ್ದಾರೆ.</p>.<p class="Subhead">‘ಜನರಿಂದ ಪದೇ ಪದೇ ತಿರಸ್ಕೃತಗೊಂಡವರು ಸಂತ್ರಸ್ತರನ್ನು ಭೇಟಿಯಾಗಿ ಸಮಾಧಾನದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>