ಅಯೋಧ್ಯೆಯಲ್ಲಿ ಸರ್ವೇಕ್ಷಣೆ ನಡೆಸಿದ್ದ ತಂಡದಲ್ಲಿ ಅವರು ಇದ್ದರು ಎಂಬುದು ಒಂದು ಕಾರಣ. ಈ ತೀರ್ಪಿನಿಂದ ಪುರಾತತ್ವ ವಿಜ್ಞಾನದ ಮಹತ್ವ ಏನೆಂಬುದನ್ನು ಮತ್ತೊಮ್ಮೆ ಸಾರಿದಂತಾಗಿದೆ ಎಂಬುದು ಅವರ ಸಂತೃಪ್ತಿಗೆ ಇನ್ನೊಂದು ಕಾರಣ. ಮೊಹಮ್ಮದ್, ಕೇರಳದ ಕೋಯಿಕ್ಕೋಡ್ ಮೂಲದವರು. ಅಯೋಧ್ಯೆಯಲ್ಲಿ ರಾಮಮಂದಿರವಿತ್ತು ಎಂಬುದನ್ನು ಸಾಬೀತು ಪಡಿಸುವಲ್ಲಿ ಇವರು ನಡೆಸುವ ಸಂಶೋಧನೆ ಮಹತ್ವದ್ದಾಗಿತ್ತು.