ಬೆಂಗಳೂರು: ಪ್ರಥಮ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ (ಎಲ್ಸಿಎ) ‘ತೇಜಸ್’ ಗುರುವಾರ ವಿಶೇಷ ಅತಿಥಿಯನ್ನು ಹೊತ್ತು ಹಾರಾಟ ನಡೆಸಿತು.
ಆ ಅತಿಥಿ ಬೇರೆ ಯಾರೂ ಅಲ್ಲ, ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್. ‘ತೇಜಸ್’ ಸೇನೆಯ ತರಬೇತಿ ಬಳಕೆಗೆ ಅರ್ಹತೆ ಪಡೆದಿದೆ ಎಂಬ ಪ್ರಮಾಣ ಪತ್ರ ಪಡೆದ ದಿನವೇ ರಾವತ್ ಯಲಹಂಕದ ವಾಯು ನೆಲೆಯಲ್ಲಿ ಹಾರಾಟ ನಡೆಸಿದ್ದು ವಿಶೇಷ.
ಬಿಪಿನ್ ರಾವತ್ ಅವರು ದೇಶಿ ನಿರ್ಮಿತ ಯುದ್ಧ ವಿಮಾನವೊಂದರಲ್ಲಿ ಹಾರಾಟ ನಡೆಸಿದ್ದೂ ಇದೇ ಮೊದಲು. ‘ತೇಜಸ್’ ಶಬ್ದಾತೀತ ವೇಗ ಹೊಂದಿದ್ದು, ಹಗುರ ಮತ್ತು ಬಹುಪಯೋಗಿ ಯುದ್ಧ ವಿಮಾನ. 30 ನಿಮಿಷಗಳ ಹಾರಾಟದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರಾವತ್, ‘ಇದೊಂದು ಅತ್ಯುತ್ತಮ ಯುದ್ಧ ವಿಮಾನ.
ಇದರಲ್ಲಿ ಹಾರಾಟ ನಡೆಸಿ ಅನುಭವ ಪಡೆಯಲು ಕಾರಣರಾದ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಅವರನ್ನು ಅಭಿನಂದಿಸುತ್ತೇನೆ. ಅಪಾರ ಸಾಮರ್ಥ್ಯ ಇದ್ದರೂ ಹಾರಾಟದ ವೇಳೆ ಸಾಮಾನ್ಯ ಹಾರಾಟದ ಕೌಶಲ ಪ್ರದರ್ಶಿಸಲಾಯಿತು. ಎಲ್ಸಿಎಯ ಗುರಿ ಇಡುವ ವ್ಯವಸ್ಥೆಯಂತೂ ಅತ್ಯುತ್ತಮವಾಗಿದೆ’ ಎಂದು ಶ್ಲಾಘಿಸಿದರು.
#WATCH Chief of the Army Staff General Bipin Rawat after taking a sortie in Light Combat Aircraft - Tejas in Bengaluru. pic.twitter.com/OOqlAARRWm