ರಾಮ್ ಲಲ್ಲಾ ವಿರಾಜ್ಮಾನ್ ಪರ ವಕೀಲ ರಂಜಿತ್ ಕುಮಾರ್ ಅವರು ವಿಷಾರದ ಅವರ ಅರ್ಜಿಯನ್ನು ಬೆಂಬಲಿಸಿದರು. ವಿವಾದವನ್ನು ಮಧ್ಯಸ್ಥಿಕೆಗೆ ವಹಿಸುವ ವಿಚಾರವನ್ನು ಹಿಂದೆಯೇ ವಿರೋಧಿಸಲಾಗಿತ್ತು ಎಂಬುದನ್ನು ನೆನಪಿಸಿಕೊಂಡರು. ಆದರೆ, ಮುಸ್ಲಿಂ ಕಕ್ಷಿದಾರರ ಪರ ವಕೀಲ ರಾಜೀವ್ ಧವನ್ ಅವರು ಇದಕ್ಕೆ ವ್ಯತಿರಿಕ್ತ ನಿಲುವು ವ್ಯಕ್ತಪಡಿಸಿದರು. ಮಧ್ಯಸ್ಥಿಕೆಯನ್ನು ರದ್ದು ಮಾಡಬಾರದು, ಮಧ್ಯಸ್ಥಿಕೆ ಪ್ರಯತ್ನವನ್ನು ಹಾಳುಗೆಡವುವುದೇ ಹೊಸ ಅರ್ಜಿಯ ಉದ್ದೇಶ ಎಂದು ವಾದಿಸಿದರು.