ಎಂಐ–17 ಹೆಲಿಕಾಪ್ಟರ್ ಹೊಡೆದುರುಳಿಸಿದ್ದು ನಮ್ಮ ಕ್ಷಿಪಣಿ: ಏರ್ ಮಾರ್ಷಲ್

ನವದೆಹಲಿ: ಶ್ರೀನಗರದ ವಾಯುನೆಲೆಯಿಂದ ಟೇಕಾಫ್ ಆದ ಎಂಐ–17 ಹೆಲಿಕಾಪ್ಟರ್ ಅನ್ನು ನಮ್ಮ ಕ್ಷಿಪಣಿಯೇ ಹೊಡೆದುರುಳಿಸಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ ಎಂದು ವಾಯುಪಡೆ ಮುಖ್ಯಸ್ಥರಾದ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಶುಕ್ರವಾರ ಹೇಳಿದ್ದಾರೆ.
ಇದನ್ನೂ ಓದಿ: ಎಂಐ–17’ ಪತನ: ಅಧಿಕಾರಿ ವರ್ಗಾವಣೆ
ವಾಯುಪಡೆ ದಿನಾಚರಣೆ ನಿಮಿತ್ತ ಮಾತನಾಡಿದ ಅವರು ಶತ್ರು ಪಾಳಯದ ಹೆಲಿಕಾಪ್ಟರ್ ಎಂದು ತಪ್ಪಾಗಿ ಭಾವಿಸಿ ನಮ್ಮ ವಾಯುಪಡೆಯ ಕ್ಷಿಪಣಿಯೇ ಎಂಐ–17 ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ, ಇದು ನಮ್ಮಿಂದಾದ ತಪ್ಪು ಎಂದು ಅವರು ಹೇಳಿದ್ದಾರೆ.
IAF Chief on Mi-17 chopper crash in Srinagar on Feb 27: Court of Inquiry completed & it was our mistake as our missile had hit our own chopper. We will take action against two officers. We accept this was our big mistake and we will ensure such mistakes are not repeated in future https://t.co/TgNS9RsKqb
— ANI (@ANI) October 4, 2019
ಈ ಹೆಲಿಕಾಪ್ಟರ್ ದುರಂತದಲ್ಲಿ ಆರು ಸಿಬ್ಬಂದಿ ಹಾಗೂ ಒಬ್ಬರು ನಾಗರೀಕರು ಮೃತಪಟ್ಟಿದ್ದರು. ಇಬ್ಬರು ಅಧಿಕಾರಿಗಳನ್ನು ನೇಮಿಸಿ ಘಟನೆ ಕುರಿತಂತೆ ತನಿಖೆಗೆ ಆದೇಶ ಮಾಡಲಾಗಿತ್ತು. ತನಿಖೆ ಪೂರ್ಣಗೊಂಡಿದ್ದು ವರದಿಯು ನಮ್ಮ ಕೈಸೇರಿದ್ದು ತಪ್ಪಿತಸ್ಥ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ತಪ್ಪು ನಡೆದಿದ್ದು ಹೇಗೆ?
ಭಾರತೀಯ ವಾಯುಪಡೆಯು ಪ್ರತಿಯೊಂದು ಯುದ್ಧ ವಿಮಾನವನ್ನು ಗುರುತಿಸುವ ವ್ಯವಸ್ಥೆ ಮಾಡಿದೆ. ಇದರಿಂದ, ಶತ್ರು ಪಾಳಯದ ಯುದ್ಧ ವಿಮಾನದ ಜತೆಗಿನ ವ್ಯತ್ಯಾಸ ಗುರುತಿಸಲು ಸಾಧ್ಯವಾಗುತ್ತದೆ. ಆದರೆ, ‘ಎಂಐ–17’ಗೆ ಅಳವಡಿಸಲಾಗಿದ್ದ ವ್ಯವಸ್ಥೆ ಫೆಬ್ರುವರಿ 27ರಂದು ಕೆಲಸ ಮಾಡಿರಲಿಲ್ಲ. ಅದನ್ನು ಸ್ಥಗಿತಗೊಳಿಸಲಾಗಿತ್ತು ಎಂದು ತನಿಖಾಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಾಯುಪಡೆ ಹೆಲಿಕಾಪ್ಟರ್ ಪತನ, 7 ಸಾವು
ಈ ವ್ಯವಸ್ಥೆ ಇಲ್ಲದ ಕಾರಣದಿಂದಲೇ ಹೆಲಿಕಾಪ್ಟರ್ ಶತ್ರು ರಾಷ್ಟ್ರಕ್ಕೆ ಸೇರಿದೆ ಎಂದು ಭಾವಿಸಿ ಹೊಡೆದುರುಳಿಸಲಾಗಿದೆ ಎಂಬ ಮಾಹಿತಿ ತನಿಖೆಯಿಂದ ಬಹಿರಂಗಗೊಂಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.