ಸ್ಥಳೀಯ ರಸ್ತೆಯೊಂದರ ಶಂಕು ಸ್ಥಾಪನೆ ಮಾಡುವಾಗ ಅದರಲ್ಲಿ ತಮ್ಮ ಹೆಸರು ಯಾಕೆ ಬರೆದಿಲ್ಲ ಎಂದು ಸಂಸದ ಶರದ್ ತ್ರಿಪಾಠಿ ಕೇಳಿದ್ದರು.ಇದಕ್ಕೆ ಶಾಸಕ ರಾಕೇಶ್ ಭಗೇಲ್, ಇದು ನನ್ನ ನಿರ್ಧಾರ ಅಂದಿದ್ದರು. ಆ ಹೊತ್ತಲ್ಲಿ ಮಾತಿಗೆ ಮಾತು ಬೆಳೆದು ತ್ರಿಪಾಠಿ, ರಾಕೇಶ್ಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಕೇಶ್ ಕೂಡಾ ಚಪ್ಪಲಿಯಲ್ಲಿ ಹೊಡೆದಿದ್ದಾರೆ.