ಮಹಾಘಟಬಂಧನ್ ನಾಯಕರ ಮಾತುಗಳು ಬಿಜೆಪಿಯನ್ನು ಆತಂಕಕ್ಕೆ ದೂಡಿವೆ. ಎನ್ಆರ್ಸಿ, ಎನ್ಪಿಆರ್ ವಿಚಾರದಲ್ಲಿ ತಮ್ಮನ್ನು ಕತ್ತಲಲ್ಲಿ ಇರಿಸಲಾಗಿತ್ತು ಎಂದು ಬಿಜೆಪಿ ನಾಯಕರು ಅಲವತ್ತುಕೊಂಡಿದ್ದರು. ನಿತೀಶ್ ವಿಚಾರದಲ್ಲಿ ಬಿಜೆಪಿ ಪಾಳಯ ತಲ್ಲಣಗೊಂಡಿರುವುದು ನಿಜ. ಇದೇ ಅಕ್ಟೋಬರ್ನಲ್ಲಿ ಬಿಹಾರ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಎನ್ಆರ್ಸಿ, ಎನ್ಪಿಆರ್ಗಳೇ ಬಿಜೆಪಿಯ ಪ್ರಮುಖ ಚುನಾವಣಾ ಅಸ್ತ್ರಗಳಾಗಿರಲಿವೆ ಎಂಬುದೂ ಅಷ್ಟೇ ಸ್ಪಷ್ಟ.