‘ಒಂದು ಬಟ್ಟಲಿನಲ್ಲಿ ನೀರಿಡಬೇಕು, ಅದರ ಬಣ್ಣ ಬದಲಾಗುತ್ತಿದ್ದಂತೆಯೇ ನಿಮ್ಮನ್ನು ರಕ್ಷಿಸಲಾಗುತ್ತದೆ’ ಎಂದು ಡೈರಿಯಲ್ಲಿ ಬರೆಯಲಾಗಿದೆ. ನೇಣು ಬಿಗಿದುಕೊಂಡರೂ ತಾವು ಸಾಯುವುದಿಲ್ಲ ಎಂದು ನಂಬಿದ್ದ ಕುಟುಂಬದ ಸದಸ್ಯರು, ‘ಭೂಮಿ ನಡುಗುತ್ತದೆ, ಆಕಾಶದಲ್ಲಿ ಗುಡುಗು ಮೊಳಗುತ್ತದೆ, ಆಗ ನಮ್ಮನ್ನು ಕಾಪಾಡಲಾಗುತ್ತದೆ’ ಎಂದು ನಂಬಿದ್ದರು. ಈ ನಂಬಿಕೆಯಿಂದಲೇ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.