‘ಮಳೆ ನೀರು ಸಂಗ್ರಹ ವ್ಯವಸ್ಥೆ ಇದ್ದರೆ ಮಾತ್ರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು. ನಿರ್ಮಾಣ ಮುಗಿದ ಮೇಲೆ ಈ ಸೌಕರ್ಯ ಇರುವುದನ್ನು ಪರಿಶಿಲಿಸಿದ ನಂತರವೇ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ ನೀಡಬೇಕು. ಜಲ ಶಕ್ತಿ ಅಭಿಯಾನದ ಸಂದರ್ಭದಲ್ಲಿ ಪ್ರತಿ ನಗರವು ಜಲಮೂಲಗಳ ಪುನರುಜ್ಜೀವನಕ್ಕೆ ಮುಂದಾಗಲೇಬೇಕು. ಜಲಮೂಲಗಳನ್ನು ಗುರುತಿಸಿ, ಸಾರ್ವಜನಿಕರ ಸಲಹೆ ಪಡೆದು ಪುನರುಜ್ಜೀವನಕ್ಕೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಸಚಿವಾಲಯ ತಿಳಿಸಿದೆ.