<p><strong>ನವದೆಹಲಿ</strong>: ಮಳೆ ನೀರು ಸಂಗ್ರಹ ಕುರಿತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ನಡೆಸಲು ಘಟಕ ಸ್ಥಾಪಿಸಬೇಕು ಹಾಗೂ ಸಂಬಂಧಪಟ್ಟ ಆಯಾ ಪ್ರದೇಶಗಳಲ್ಲಿ ಕನಿಷ್ಠ ಒಂದು ಜಲಮೂಲವನ್ನು ಪುನರುಜ್ಜೀವನಗೊಳಿಸಲುನಗರ ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು ಎಂದು ಕೇಂದ್ರ ಹೇಳಿದೆ.</p>.<p>ನಗರ ಸ್ಥಳೀಯ ಸಂಸ್ಥೆಗಳ ಮಳೆ ನೀರು ಸಂಗ್ರಹ ಘಟಕಗಳು ಅಂತರ್ಜಲ ಹೊರತೆಗೆಯುವಿಕೆಯನ್ನು ಮತ್ತು ಅಂತರ್ಜಲ ಮರುಪೂರಣ ಕುರಿತು ಮೇಲ್ವಿಚಾರಣೆ ನಡೆಸಲಿದೆ ಎಂದು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ‘ನಗರ ನೀರು ಸಂರ<br />ಕ್ಷಣೆಗಾಗಿ ಮಾರ್ಗಸೂಚಿ‘ಯಲ್ಲಿ ತಿಳಿಸಿದೆ.</p>.<p>ಸಾರ್ವಜನಿಕರಿಗಾಗಿ ಈ ಕುರಿತ ಮಾಹಿತಿಯನ್ನು ಸೂಕ್ತ ಸ್ಥಳದಲ್ಲಿ ಪ್ರದರ್ಶಿಸಬೇಕು ಎಂದೂ ಸಚಿವಾಲಯ ಹೇಳಿದೆ.</p>.<p>ಜುಲೈ 1 ರಿಂದ ಸೆಪ್ಟೆಂಬರ್ 15ರ ವರೆಗೆ ನಡೆಯುವ ‘ಜಲ ಶಕ್ತಿ ಅಭಿಯಾನದ‘ ಮೊದಲ ಹಂತದ ಅಂಗವಾಗಿ ಈ ಮಾರ್ಗಸೂಚಿಗಳನ್ನು ನೀಡಲಾಗಿದೆ. 2ನೇ ಹಂತವು ಅಕ್ಟೋಬರ್ 1 ರಿಂದ ನವೆಂಬರ್ 30ರ ವರೆಗೆ ನಡೆಯಲಿದೆ.</p>.<p>‘ಮಳೆ ನೀರು ಸಂಗ್ರಹ ವ್ಯವಸ್ಥೆ ಇದ್ದರೆ ಮಾತ್ರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು. ನಿರ್ಮಾಣ ಮುಗಿದ ಮೇಲೆ ಈ ಸೌಕರ್ಯ ಇರುವುದನ್ನು ಪರಿಶಿಲಿಸಿದ ನಂತರವೇ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ ನೀಡಬೇಕು. ಜಲ ಶಕ್ತಿ ಅಭಿಯಾನದ ಸಂದರ್ಭದಲ್ಲಿ ಪ್ರತಿ ನಗರವು ಜಲಮೂಲಗಳ ಪುನರುಜ್ಜೀವನಕ್ಕೆ ಮುಂದಾಗಲೇಬೇಕು. ಜಲಮೂಲಗಳನ್ನು ಗುರುತಿಸಿ, ಸಾರ್ವಜನಿಕರ ಸಲಹೆ ಪಡೆದು ಪುನರುಜ್ಜೀವನಕ್ಕೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಸಚಿವಾಲಯ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮಳೆ ನೀರು ಸಂಗ್ರಹ ಕುರಿತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ನಡೆಸಲು ಘಟಕ ಸ್ಥಾಪಿಸಬೇಕು ಹಾಗೂ ಸಂಬಂಧಪಟ್ಟ ಆಯಾ ಪ್ರದೇಶಗಳಲ್ಲಿ ಕನಿಷ್ಠ ಒಂದು ಜಲಮೂಲವನ್ನು ಪುನರುಜ್ಜೀವನಗೊಳಿಸಲುನಗರ ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು ಎಂದು ಕೇಂದ್ರ ಹೇಳಿದೆ.</p>.<p>ನಗರ ಸ್ಥಳೀಯ ಸಂಸ್ಥೆಗಳ ಮಳೆ ನೀರು ಸಂಗ್ರಹ ಘಟಕಗಳು ಅಂತರ್ಜಲ ಹೊರತೆಗೆಯುವಿಕೆಯನ್ನು ಮತ್ತು ಅಂತರ್ಜಲ ಮರುಪೂರಣ ಕುರಿತು ಮೇಲ್ವಿಚಾರಣೆ ನಡೆಸಲಿದೆ ಎಂದು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ‘ನಗರ ನೀರು ಸಂರ<br />ಕ್ಷಣೆಗಾಗಿ ಮಾರ್ಗಸೂಚಿ‘ಯಲ್ಲಿ ತಿಳಿಸಿದೆ.</p>.<p>ಸಾರ್ವಜನಿಕರಿಗಾಗಿ ಈ ಕುರಿತ ಮಾಹಿತಿಯನ್ನು ಸೂಕ್ತ ಸ್ಥಳದಲ್ಲಿ ಪ್ರದರ್ಶಿಸಬೇಕು ಎಂದೂ ಸಚಿವಾಲಯ ಹೇಳಿದೆ.</p>.<p>ಜುಲೈ 1 ರಿಂದ ಸೆಪ್ಟೆಂಬರ್ 15ರ ವರೆಗೆ ನಡೆಯುವ ‘ಜಲ ಶಕ್ತಿ ಅಭಿಯಾನದ‘ ಮೊದಲ ಹಂತದ ಅಂಗವಾಗಿ ಈ ಮಾರ್ಗಸೂಚಿಗಳನ್ನು ನೀಡಲಾಗಿದೆ. 2ನೇ ಹಂತವು ಅಕ್ಟೋಬರ್ 1 ರಿಂದ ನವೆಂಬರ್ 30ರ ವರೆಗೆ ನಡೆಯಲಿದೆ.</p>.<p>‘ಮಳೆ ನೀರು ಸಂಗ್ರಹ ವ್ಯವಸ್ಥೆ ಇದ್ದರೆ ಮಾತ್ರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು. ನಿರ್ಮಾಣ ಮುಗಿದ ಮೇಲೆ ಈ ಸೌಕರ್ಯ ಇರುವುದನ್ನು ಪರಿಶಿಲಿಸಿದ ನಂತರವೇ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ ನೀಡಬೇಕು. ಜಲ ಶಕ್ತಿ ಅಭಿಯಾನದ ಸಂದರ್ಭದಲ್ಲಿ ಪ್ರತಿ ನಗರವು ಜಲಮೂಲಗಳ ಪುನರುಜ್ಜೀವನಕ್ಕೆ ಮುಂದಾಗಲೇಬೇಕು. ಜಲಮೂಲಗಳನ್ನು ಗುರುತಿಸಿ, ಸಾರ್ವಜನಿಕರ ಸಲಹೆ ಪಡೆದು ಪುನರುಜ್ಜೀವನಕ್ಕೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಸಚಿವಾಲಯ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>