ನವದೆಹಲಿ: ದೆಹಲಿ ಹೈಕೋರ್ಟ್ನನ್ಯಾಯಮೂರ್ತಿ ಎಸ್. ಮುರಳೀಧರ್ ಅವರನ್ನುಪಂಜಾಬ್ಮತ್ತು ಹರಿಯಾಣ ಹೈಕೋರ್ಟ್ಗೆ ವರ್ಗಾವಣೆಗೊಳಿಸಿ ಕೇಂದ್ರ ಸರ್ಕಾರವು ಬುಧವಾರ ರಾತ್ರಿ ಆದೇಶ ಹೊರಡಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಪರ–ವಿರೋಧಿಗಳ ನಡುವೆ ಸಂಭವಿಸಿದಹಿಂಸಾಚಾರಕ್ಕೆಸಂಬಂಧಿಸಿದಂತೆ ಕೇಂದ್ರಸರ್ಕಾರ, ರಾಜ್ಯಸರ್ಕಾರಮತ್ತು ದೆಹಲಿಪೊಲೀಸರಕಾರ್ಯವೈಖರಿಯನ್ನುನ್ಯಾಯಮೂರ್ತಿ ಎಸ್.ಮುರಳೀಧರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ವರ್ಗಾವಣೆ ಆದೇಶ ಹೊರಬಿದ್ದಿದೆ.
ರಾಷ್ಟ್ರಪತಿಗಳುಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸಿ ಭಾರತ ಸಂವಿಧಾನದ 222ನೇ ವಿಧಿಯ 1ಪರಿಚ್ಛೇದದಲ್ಲಿನೀಡಲಾದ ವಿಶೇಷ ಅಧಿಕಾರವನ್ನು ಬಳಸಿ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಎಸ್ ಮುರಳೀಧರ್ ಅವರನ್ನುಪಂಜಾಬ್ಮತ್ತು ಹರಿಯಾಣ ಹೈಕೋರ್ಟ್ಗೆವರ್ಗಾವಣೆಗೊಳಿಸಿದ್ದಾರೆ ಎಂದುಸರ್ಕಾರಹೊರಡಿಸಿರುವಆದೇಶ ಹೇಳಿದೆ.
ಮೂವರು ಹೈಕೋರ್ಟ್ನ ನ್ಯಾಯಮೂರ್ತಿಗಳ ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್ನ ಕೊಲಿಜಿಯಂಶಿಫಾರಸು ಮಾಡಿತ್ತು.
ನ್ಯಾಯಮೂರ್ತಿಮುರಳೀಧರ್ಅವರನ್ನುಪಂಜಾಬ್ಮತ್ತು ಹರಿಯಾಣ ಹೈಕೋರ್ಟ್ಗೆ ವರ್ಗಾವಣೆಗೊಳಿಸಿ ಹೊರಡಿಸಿದ್ದ ಆದೇಶಕ್ಕೆ ದೆಹಲಿಹೈಕೋರ್ಟ್ಬಾರ್ ಅಸೋಸಿಯೇಷನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ವರ್ಗಾವಣೆ ವಿರೋಧಿಸಿ ಅಸೋಸಿಯೇಷನ್ ಕೆಲಸಮೊಟಕುಗೊಳಿಸಿದೆ.
ಇಂಥ ವರ್ಗಾವಣೆಗಳುನ್ಯಾಯದಾನ ವ್ಯವಸ್ಥೆಗೆಅಪಾಯಕಾರಿ ಮಾತ್ರವಲ್ಲ;ನ್ಯಾಯಾಲಯದ ಮೇಲೆ ಜನರಿಗೆ ಇರುವ ವಿಶ್ವಾಸವನ್ನುನಾಶಗೊಳಿಸುತ್ತದೆಎಂದು ಅಸೋಸಿಯೇಷನ್ ಹೇಳಿದೆ.
ನ್ಯಾಯಮೂರ್ತಿ ಎಸ್.ಮುರಳೀಧರ್ಅವರನ್ನುವರ್ಗಾವಣೆಗೊಳಿಸುವಂತೆಕೊಲಿಜಿಯಂಎರಡು ಬಾರಿ ಸೂಚಿಸಿತ್ತು. ಆದರೆ ಹಿರಿಯ ನ್ಯಾಯಮೂರ್ತಿಗಳ ವಿರೋಧದಿಂದಾಗಿ ವರ್ಗಾವಣೆ ಪ್ರಕ್ರಿಯೆಕೈಬಿಡಲಾಗಿತ್ತು. ‘ಮೈ ಲಾರ್ಡ್’ಮತ್ತು ‘ಯುವರ್ ಲಾರ್ಡ್ಷಿಪ್’ಪದಬಳಕೆಯನ್ನು ಮುರಳೀಧರ್ ವಿರೋಧಿಸಿದ್ದರು ಎಂದು ಮೂಲಗಳು ತಿಳಿಸಿವೆ. 2023ರಲ್ಲಿ ಅವರು ನಿವೃತ್ತಿ ಹೊಂದಲಿದ್ದಾರೆ.
ಟ್ವಿಟ್ಟರ್ನಲ್ಲಿ#JusticeMuralidhar ಹ್ಯಾಷ್ಟ್ಯಾಗ್ ಟ್ರೆಂಡ್ ಆಗುತ್ತಿದೆ.ಈ ಹ್ಯಾಷ್ಟ್ಯಾಗ್ ಬಳಸಿ ಗುರುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಸುಮಾರು 19 ಸಾವಿರ ಮಂದಿಟ್ವೀಟ್ ಮಾಡಿದ್ದಾರೆ.