ಬ್ಯಾಂಕ್ನ ಕೆಲವು ಹಿರಿಯ ಅಧಿಕಾರಿಗಳ ಮೇಲೆಯೂ ನಿಗಾ ಇರಿಸಲಾಗಿದೆ. ಬ್ಯಾಂಕ್ನ ಈಗಿನ ಸಿಇಒ ಸಂದೀಪ್ ಬಕ್ಷಿ, ಸಾಲ ಮಂಜೂರಾತಿ ಸಮಿತಿಯಲ್ಲಿ ಇದ್ದ ಸಂಜಯ್ ಚಟರ್ಜಿ, ಝರೀನ್ ದಾರೂವಾಲಾ, ರಾಜೀವ್ ಸಬರ್ವಾಲ್, ಕೆ.ವಿ. ಕಾಮತ್ ಮತ್ತು ಹೋಮಿ ಖುಸ್ರೊಖಾನ್ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ವಿಡಿಯೊಕಾನ್ ಕಂಪನಿಯ ಮುಂಬೈ ಮತ್ತು ಔರಂಗಾಬಾದ್ ಕಚೇರಿಗಳು, ದೀಪಕ್ ಕೊಚ್ಚರ್ ಅವರ ನ್ಯೂಪವರ್ ರಿನೀವೆಬಲ್ಸ್ ಪ್ರೈ.ಲಿ.ನ ಕಚೇರಿಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದಾರೆ.