ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ2: ಇಂದು ಶ್ರೀಹರಿಕೋಟ ತಲುಪಲಿರುವ ವಿಕ್ರಮ್ ಲ್ಯಾಂಡರ್, ಪ್ರಜ್ಞ್ಯಾ ರೋವರ್

Last Updated 18 ಜೂನ್ 2019, 11:06 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಯ ಭಾಗವಾಗಿರುವಆರ್ಬಿಟರ್‌ ಇದೇ ಜೂನ್ 15ರಂದು ಉಡಾವಣಾ ಕೇಂದ್ರ ಶ್ರೀಹರಿಕೋಟವನ್ನು ತಲುಪಿದೆ.

ಇದೇ ಯೋಜನೆಯವಿಕ್ರಮ್ ಲ್ಯಾಂಡರ್ (ಪ್ರಜ್ಞ್ಯಾ ರೋವರ್ ) ಅನ್ನು ನಿನ್ನೆ ಬೆಂಗಳೂರಿನಿಂದ ಕಳುಹಿಸಲಾ. ಇಂದುವಿಕ್ರಮ್ ಲ್ಯಾಂಡರ್ ಶ್ರೀಹರಿಕೋಟವನ್ನು ತಲುಪಲಿದೆ ಎಂದೆ ಇಸ್ರೋ ಟ್ವೀಟ್ ಮಾಡಿದೆ.

ನಿನ್ನೆ ಸರ್ಕಾರಿ ಟ್ರಕ್‌ನಲ್ಲಿವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞ್ಯಾ ರೋವರ್ ಅನ್ನು ಕಳುಹಿಸಿಕೊಡಲಾಯಿತು.

ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರದಲ್ಲಿ ಈ ಸಾಧನಗಳನ್ನು ತಯಾರು ಮಾಡಲಾಗಿದೆ.ಇಸ್ರೋ ಕಳೆದ ಬುಧವಾರ ಇವುಗಳನ್ನು ಪ್ರದರ್ಶನ ಮಾಡಿ ಪತ್ರಿಕಾಗೋಷ್ಠಿ ನಡೆಸಿತ್ತು.

ಜುಲೈ ಮೊದಲ ವಾರ ಚಂದ್ರಯಾನ -2 ಯೋಜನೆಯಂತೆ ಭೂಸ್ಥಿರ ಉಡಾವಣಾ ವಾಹಕವು ಈ ಸಾಧನಗಳನ್ನು ಹೊತ್ತು ನಭಕ್ಕೆ ನೆಗೆಯಲಿದೆ. ಸೆಪ್ಟೆಂಬರ್‌ ವೇಳೆಗೆ ಆರ್ಬಿಟರ್‌ ಚಂದ್ರನ ಆವರಣ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT