ಬಿಜಾಪುರದ ಗ್ರಾಮೀಣ ಪ್ರದೇಶವಾದಪದೇಡಾದಲ್ಲಿ ವಾಸವಿರುವಗರ್ಭಿಣಿಯೊಬ್ಬರಿಗೆ ತುರ್ತು ಚಿಕಿತ್ಸೆಯ ಅಗತ್ಯ ಎದುರಾಗಿದೆ.ರಸ್ತೆ ಸಂಪರ್ಕವಿಲ್ಲದ ಪ್ರದೇಶವಾದದ್ದರಿಂದ ಕೂಡಲೇ ಸ್ಥಳಕ್ಕಾಗಮಿಸಿದ ಸಿಆರ್ಪಿಎಫ್ ಯೋಧರು ನೆರವಿಗೆ ಮುಂದಾಗಿದ್ದಾರೆ. ಅರಣ್ಯ ಪ್ರದೇಶದ ಮೂಲಕ ಗರ್ಭಿಣಿಯನ್ನು ಮಂಚಸಮೇತ ಹೊತ್ತುಕೊಂಡು ಸುಮಾರು 6 ಕಿ.ಮೀ ದೂರದವರೆಗೆ ರಸ್ತೆ ಸಂಪರ್ಕ ಇರುವಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ ವಾಹನ ವ್ಯವಸ್ಥೆ ಮಾಡಿ ಆಕೆಯನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಸಿಆರ್ಪಿಎಫ್ ಯೋಧರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.