<p><strong>ರಾಯ್ಪುರ:</strong>ಶೀತಗಾಳಿಯಲ್ಲಿ ನಡುಗುತ್ತಿರುವ ಜಮ್ಮು–ಕಾಶ್ಮೀರದಲ್ಲಿ ಗರ್ಭಿಣಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಲು ಯೋಧರು ಮಾನವೀಯ ಹಸ್ತ ಚಾಚಿದ್ದು ಇತ್ತೀಚೆಗೆ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಛತ್ತೀಸ್ಗಡದ ಬಿಜಾಪುರದಲ್ಲಿ ಸಿಆರ್ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಯೋಧರೂ ಅದೇ ರೀತಿ ಮಾನವೀಯತೆ ಮೆರೆದಿದ್ದಾರೆ.</p>.<p>ಬಿಜಾಪುರದ ಗ್ರಾಮೀಣ ಪ್ರದೇಶವಾದಪದೇಡಾದಲ್ಲಿ ವಾಸವಿರುವಗರ್ಭಿಣಿಯೊಬ್ಬರಿಗೆ ತುರ್ತು ಚಿಕಿತ್ಸೆಯ ಅಗತ್ಯ ಎದುರಾಗಿದೆ.ರಸ್ತೆ ಸಂಪರ್ಕವಿಲ್ಲದ ಪ್ರದೇಶವಾದದ್ದರಿಂದ ಕೂಡಲೇ ಸ್ಥಳಕ್ಕಾಗಮಿಸಿದ ಸಿಆರ್ಪಿಎಫ್ ಯೋಧರು ನೆರವಿಗೆ ಮುಂದಾಗಿದ್ದಾರೆ. ಅರಣ್ಯ ಪ್ರದೇಶದ ಮೂಲಕ ಗರ್ಭಿಣಿಯನ್ನು ಮಂಚಸಮೇತ ಹೊತ್ತುಕೊಂಡು ಸುಮಾರು 6 ಕಿ.ಮೀ ದೂರದವರೆಗೆ ರಸ್ತೆ ಸಂಪರ್ಕ ಇರುವಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ ವಾಹನ ವ್ಯವಸ್ಥೆ ಮಾಡಿ ಆಕೆಯನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಸಿಆರ್ಪಿಎಫ್ ಯೋಧರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/indian-army-supports-mother-in-kashmir-698408.html" target="_blank">ವೈರಲ್ ವಿಡಿಯೊ | ಶೀತಗಾಳಿಗೆ ಬೆಚ್ಚದೆ ತಾಯಿ ನೋವಿಗೆ ಆಸರೆಯಾದ ಯೋಧರು</a></p>.<p>ಜಮ್ಮು–ಕಾಶ್ಮೀರದಲ್ಲಿ ಯೋಧರು ಗರ್ಭಿಣಿಗೆ ನೆರವಾದ ವಿಡಿಯೊವೊಂದನ್ನು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಇತ್ತೀಚೆಗೆ ಹಂಚಿಕೊಂಡಿತ್ತು. ಯೋಧರ ಈ ಮಾನವೀಯ ಕಾರ್ಯಕ್ಕೆ ಸೇನಾ ದಿನದಂದುಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯ್ಪುರ:</strong>ಶೀತಗಾಳಿಯಲ್ಲಿ ನಡುಗುತ್ತಿರುವ ಜಮ್ಮು–ಕಾಶ್ಮೀರದಲ್ಲಿ ಗರ್ಭಿಣಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಲು ಯೋಧರು ಮಾನವೀಯ ಹಸ್ತ ಚಾಚಿದ್ದು ಇತ್ತೀಚೆಗೆ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಛತ್ತೀಸ್ಗಡದ ಬಿಜಾಪುರದಲ್ಲಿ ಸಿಆರ್ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಯೋಧರೂ ಅದೇ ರೀತಿ ಮಾನವೀಯತೆ ಮೆರೆದಿದ್ದಾರೆ.</p>.<p>ಬಿಜಾಪುರದ ಗ್ರಾಮೀಣ ಪ್ರದೇಶವಾದಪದೇಡಾದಲ್ಲಿ ವಾಸವಿರುವಗರ್ಭಿಣಿಯೊಬ್ಬರಿಗೆ ತುರ್ತು ಚಿಕಿತ್ಸೆಯ ಅಗತ್ಯ ಎದುರಾಗಿದೆ.ರಸ್ತೆ ಸಂಪರ್ಕವಿಲ್ಲದ ಪ್ರದೇಶವಾದದ್ದರಿಂದ ಕೂಡಲೇ ಸ್ಥಳಕ್ಕಾಗಮಿಸಿದ ಸಿಆರ್ಪಿಎಫ್ ಯೋಧರು ನೆರವಿಗೆ ಮುಂದಾಗಿದ್ದಾರೆ. ಅರಣ್ಯ ಪ್ರದೇಶದ ಮೂಲಕ ಗರ್ಭಿಣಿಯನ್ನು ಮಂಚಸಮೇತ ಹೊತ್ತುಕೊಂಡು ಸುಮಾರು 6 ಕಿ.ಮೀ ದೂರದವರೆಗೆ ರಸ್ತೆ ಸಂಪರ್ಕ ಇರುವಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ ವಾಹನ ವ್ಯವಸ್ಥೆ ಮಾಡಿ ಆಕೆಯನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಸಿಆರ್ಪಿಎಫ್ ಯೋಧರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/indian-army-supports-mother-in-kashmir-698408.html" target="_blank">ವೈರಲ್ ವಿಡಿಯೊ | ಶೀತಗಾಳಿಗೆ ಬೆಚ್ಚದೆ ತಾಯಿ ನೋವಿಗೆ ಆಸರೆಯಾದ ಯೋಧರು</a></p>.<p>ಜಮ್ಮು–ಕಾಶ್ಮೀರದಲ್ಲಿ ಯೋಧರು ಗರ್ಭಿಣಿಗೆ ನೆರವಾದ ವಿಡಿಯೊವೊಂದನ್ನು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಇತ್ತೀಚೆಗೆ ಹಂಚಿಕೊಂಡಿತ್ತು. ಯೋಧರ ಈ ಮಾನವೀಯ ಕಾರ್ಯಕ್ಕೆ ಸೇನಾ ದಿನದಂದುಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>