ಮುಂಗಾರು ಹಂಗಾಮಿನಲ್ಲಿ ಬರದಿಂದ ನಷ್ಟ ಉಂಟಾಗಿದ್ದಕ್ಕೆ ಎನ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ₹ 2,434 ಕೋಟಿ ನಷ್ಟ ಪರಿಹಾರ ಕೋರಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಕೇವಲ ₹ 949.49 ಕೋಟಿ ಮಂಜೂರು ಮಾಡಿದೆ. ಬರ ನಿರ್ವಹಣೆಗೆ ಅನುವಾಗುವಂತೆ ಇನ್ನೂ ಹೆಚ್ಚಿನ ಪರಿಹಾರವನ್ನು ತಕ್ಷಣ ಮಂಜೂರು ಮಾಡಬೇಕು ಎಂದು ಅವರು ಕೋರಿದರು.