ನವದೆಹಲಿ: ಉತ್ತರ ಪ್ರದೇಶದ ಅಮ್ರೊಹಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್ ಬದಲಿಸಿದೆ. ರಶೀದ್ ಅಲ್ವಿ ಬದಲಾಗಿ ಸಚಿನ್ ಚೌಧರಿ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.
ಜೆಡಿಎಸ್ನ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಇತ್ತೀಚೆಗೆ ಮಾಯಾವತಿ ಅವರ ಪಕ್ಷ ಸೇರಿರುವ ಡ್ಯಾನಿಶ್ ಅಲಿಬಿಎಸ್ಪಿ ಅಭ್ಯರ್ಥಿಯಾಗಿ ಅಮ್ರೊಹಾದಿಂದ ಕಣಕ್ಕಿಳಿಯಲು ನಿರ್ಧರಿಸಿದ ಬೆನ್ನಲ್ಲೇ ಕಾಂಗ್ರೆಸ್ ಈ ಬದಲಾವಣೆ ಮಾಡಿದೆ.
ಅಮ್ರೊಹಾದಿಂದ ಸ್ಪರ್ಧಿಸಲು ಅಲ್ವಿ ಅವರಿಗೆ ಇಷ್ಟವಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಶನಿವಾರ ಎಂಟನೇ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಅಲ್ವಿ ಹೆಸರನ್ನು ಪ್ರಕಟಿಸಿತ್ತು. ಕಾಂಗ್ರೆಸ್ನ ವಕ್ತಾರರೂ ಆಗಿದ್ದ ಅಲ್ವಿ 1999–2004ರ ಅವಧಿಯಲ್ಲಿ ಅಮ್ರೊಹಾ ಕ್ಷೇತ್ರದ ಸಂಸದರಾಗಿ ಆರಿಸಿಬಂದಿದ್ದರು. ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.