ಇದಕ್ಕೆ ತಿರುಗೇಟು ನೀಡಿರುವ ಘೋಷ್, ‘ದೆಹಲಿಯ ಈ ತೀವ್ರ ಚಳಿಗಾಲದ ರಾತ್ರಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ತೆರೆದ ಮೈದಾನದಲ್ಲಿ ಕುಳಿತು ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂಬುದು ನಮಗೆ ತಿಳಿದುಬಂದಿದೆ. ಅವರಲ್ಲಿ ಯಾರೊಬ್ಬರೂ ಅಸೌಖ್ಯಕ್ಕೀಡಾಗದಿರುವ ಬಗ್ಗೆ ನನಗೆ ಆಶ್ಚರ್ಯವಾಗುತ್ತಿದೆ. ಅವರಿಗೆ ಯಾಕೆ ಏನೂ ಆಗುತ್ತಿಲ್ಲ? ಒಬ್ಬನೇ ಒಬ್ಬ ಪ್ರತಿಭಟನಾಕಾರನೂ ಯಾಕೆ ಸಾವಿಗೀಡಾಗಿಲ್ಲ’ ಎಂದು ಪ್ರಶ್ನಿಸಿದ್ದಾರೆ.