ನವದೆಹಲಿ : ತಮ್ಮ ಭಾರತ ಭೇಟಿಯಿಂದ ಯಾವುದೇ ತಪ್ಪು ಸಂದೇಶ ರವಾನೆಯಾಗಬಾರದು ಎಂದು ಟ್ರಂಪ್ ಬಹಳ ಎಚ್ಚರ ವಹಿಸಿದ್ದು ಮಾಧ್ಯಮಗೋಷ್ಠಿಯಲ್ಲಿ ಕಂಡುಬಂತು.
ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದರು.
‘ನಾನು ವಿವಾದ ಸೃಷ್ಟಿಸಲು ಬಯಸುವುದಿಲ್ಲ. ಎರಡು ದಿನಗಳ ಭಾರತ ಭೇಟಿ ಮತ್ತು ಅದಕ್ಕಾಗಿ ನಡೆಸಿದ ಎರಡು ದಿನಗಳ ಪ್ರಯಾಣವು ವ್ಯರ್ಥವಾಗುವುದು ನನಗೆ ಇಷ್ಟವಿಲ್ಲ. ನೀವು ಏನೋ ಪ್ರಶ್ನೆ ಕೇಳಿ, ಅದಕ್ಕೆ ನಾನು ಏನೋ ಹೇಳಿದರೆ ನೀವು ಅದನ್ನೇ ಭಾರಿ ಸುದ್ದಿಯಾಗಿಸುವಿರಿ. ನನ್ನ ಪ್ರವಾಸದ ಬಗ್ಗೆ ಮಾತನಾಡುವುದೇ ಇಲ್ಲ. ಅದು ನನಗೆ ಇಷ್ಟವಿಲ್ಲ’ ಎಂದರು.
‘ಸಿಎಎ, ಭಾರತದ ಆಂತರಿಕ ವಿಚಾರ. ಭಾರತ ಸರಿಯಾದ ತೀರ್ಮಾನ ಕೈಗೊಳ್ಳುವುದೆಂಬ ವಿಶ್ವಾಸವಿದೆ. ಹಿಂಸಾಚಾರ ಘಟನೆಯ ಬಗ್ಗೆ ನಾನು ಕೇಳಿದ್ದೇನೆ. ಆದರೆ, ನಮ್ಮ ಮಾತುಕತೆಯ ಸಂದರ್ಭದಲ್ಲಿ ಆ ವಿಚಾರ ಪ್ರಸ್ತಾಪವಾಗಿಲ್ಲ. ಅದೂ ಆಂತರಿಕ ವಿಚಾರವೇ’ ಎಂದರು.
ಮಂಗಳವಾರದ ಟ್ರಂಪ್ ಕಾರ್ಯಕ್ರಮ
-ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ. ಟ್ರಂಪ್ ದಂಪತಿಯನ್ನು ಬರಮಾಡಿಕೊಂಡ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಮೋದಿ