ಸಂಸದ ಪರ್ವೇಶ್ ವರ್ಮಾ ಶಹೀನಾಬಾಗ್ನಲ್ಲಿ ನೆರೆದಿದ್ದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವಾಗ ಪ್ರಚೋದನಕಾರಿ ಭಾಷಣ ಮಾಡಿ, ಕೊಲೆ, ಅತ್ಯಾಚಾರ ಎಂಬ ಆಕ್ಷೇಪಾರ್ಯ ಪದಗಳನ್ನು ಬಳಸಿದ್ದರು.ಕೇಂದ್ರ ಸಚಿವ ಅನುರಾಗ್ ಠಾಕೂರ್ ಬಿಜೆಪಿ ಅಭ್ಯರ್ಥಿ ಮನೀಷ್ ಚೌದರಿ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡು 'ಗೋಲಿ ಮಾರ್ ಸು....ಕೋ ಎಂಬ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು.ಈ ಇಬ್ಬರ ಹೇಳಿಕೆಗಳನ್ನು ರಾಜಕೀಯ ವಿಶ್ಲೇಷಕರು ಹಾಗೂ ವಿರೋಧ ಪಕ್ಷಗಳ ಮುಖಂಡರು ಆಕ್ಷೇಪಿಸಿದ್ದು,
ಇದು ಕೋಮುಭಾವನೆಯನ್ನು ಕೆರಳಿಸುವ ಆ ಮೂಲಕ ದೇಶ ವಿಭಜಿಸುವ ಕೃತ್ಯವಾಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.