ಫೆ.10ರಂದು ಇಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಅವರು, ‘25–30 ವರ್ಷಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದವರನ್ನು ಕೈಬಿಟ್ಟು, ಈಗ ಏಕಾಏಕಿ ಆನಂದ ಸಿಂಗ್ ಅವರನ್ನು ಕರೆತಂದು ಮಗ್ಗುಲಲ್ಲಿ ಕೂರಿಸಿಕೊಂಡಿದ್ದು ಸರಿಯಲ್ಲ. ನೀವು ತಪ್ಪು ಮಾಡುತ್ತಿದ್ದೀರಿ’ ಎಂದು ಕಿಡಿ ಕಾರಿದರು.