ಈ ಕುರಿತು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಮಾತನಾಡಿ, ಎರಡೂ ಕಡೆಯವರೂ ರಾಜಕೀಯ ವಿಚಾರವನ್ನು ಇತ್ಯರ್ಥಪಡಿಸಿಕೊಳ್ಳಲು ನ್ಯಾಯಾಲಯವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಕುರಿತು ನಮಗೆ ಅರಿವಿದೆ. ನೀವಿಬ್ಬರು ಟಿವಿ ಚಾನೆಲ್ಗೆ ಹೋಗುವುದು ಉತ್ತಮ ಎನಿಸುತ್ತದೆ ಮತ್ತು ಅಲ್ಲಿ ರಾಜಕೀಯ ವಿಚಾರವನ್ನು ಇತ್ಯರ್ಥ ಮಾಡಿಕೊಳ್ಳಬಹುದು ಎಂದು ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.