ಪಣಜಿ: ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಎರಡು ದಿನಗಳೊಳಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶುಕ್ರವಾರ ಹೇಳಿದ್ದಾರೆ.
ಸಾವಂತ್ ನೇತೃತ್ವದ ಬಿಜೆಪಿ ನಿಯೋಗವು ನ. 4ರಂದು ನವದೆಹಲಿಗೆ ತೆರಳಿ ಜಾವಡೇಕರ್ ಅವರನ್ನು ಭೇಟಿ ಮಾಡಿತ್ತು. ಈ ಬಗ್ಗೆ ಹತ್ತು ದಿನಗಳೊಳಗೆ ಪ್ರತಿಕ್ರಿಯೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದರು.
ಜಾವಡೇಕರ್ ಜೊತೆ ಮಾತನಾಡಿದ್ದೇನೆ. ಸಮಿತಿ ಸಭೆ ಬಾಕಿ ಇದ್ದು, ಎರಡು ದಿನಗಳೊಳಗೆ ಪ್ರತಿಕ್ರಿಯಿಸುವ ಭರವಸೆ ನೀಡಿದ್ದಾರೆ‘ ಎಂದು ಸಾವಂತ್ ಹೇಳಿದ್ದಾರೆ.