ಜೂನ್ 8ರಿಂದ ಲಾಕ್ಡೌನ್ ಸಡಿಲಿಕೆ ಆರಂಭವಾಗಲಿದ್ದು ‘ಅನ್ಲಾಕ್ 1’ರಲ್ಲಿ , ದೇವಸ್ಥಾನ, ಮಸೀದಿ, ಚರ್ಚ್ಗಳು ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಭಕ್ತರು ಭೇಟಿ ನೀಡಲು ಷರತ್ತುಬದ್ಧ ಅನುಮತಿಯನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ, ‘ಸಮುದಾಯದಲ್ಲಿ ಸೋಂಕು ಹರಡುವ ಭೀತಿ ಇರುವುದರಿಂದ ಸಮುದಾಯದ ಜನರು ಹಾಗೂ ಸಮಾಜದ ಹಿತದೃಷ್ಟಿಯಿಂದಗೋವಾದಲ್ಲಿ ಮಸೀದಿಗಳನ್ನು ತೆರೆಯುವುದಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಶೇಖ್ ಬಶೀರ್ ಅಹಮ್ಮದ್ ಶನಿವಾರ ತಿಳಿಸಿದರು.