ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪಡೆದ ಐಎಎಸ್ ಅಧಿಕಾರಿ ಉದಿತ್ ಪ್ರಕಾಶ್‌‌ಗಾಗಿ ದೆಹಲಿ ಸಿಬಿಐ ಶೋಧ

Last Updated 7 ಫೆಬ್ರುವರಿ 2020, 16:04 IST
ಅಕ್ಷರ ಗಾತ್ರ

ನವದೆಹಲಿ:ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಉದಿತ್ ಪ್ರಕಾಶ್ ರೈ ಎಂಬುವರಿಗಾಗಿ ಸಿಬಿಐ ಶೋಧ ನಡೆಸುತ್ತಿದೆ.

ಜಿಎಸ್‌‌ಟಿ ತೆರಿಗೆ ವಂಚನೆ ಪ್ರಕರಣವನ್ನು ಮುಚ್ಚಿ ಹಾಕುವುದಾಗಿ ದೆಹಲಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರ ವಿಶೇಷಾಧಿಕಾರಿ ಗೋಪಾಲ್ ಕೃಷ್ಣಮಾಧವ್ ಎಂಬುವರನ್ನು ಗುರುವಾರ ಬಂಧಿಸಲಾಗಿದೆ. ಈ ಸಂಬಂಧ ಐಎಎಸ್ ಅಧಿಕಾರಿ ಉದಿತ್ ಪ್ರಕಾಶ್ ರೈ (2007) ಅವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ಸರಕು ಸಾಗಾಣಿಕೆ ಲಾರಿಗಳನ್ನು ದೆಹಲಿ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದರು. ಈ ಲಾರಿಗಳನ್ನು ಬಿಡುಗಡೆ ಮಾಡಲು ₹3.30 ಲಂಚಕ್ಕಾಗಿ ಒತ್ತಾಯಿಸಲಾಗಿತ್ತು.ಮೊದಲ ಕಂತಾಗಿ ₹ 2.26 ಲಕ್ಷ ಕೊಡಲಾಗಿತ್ತು.ಇದೆಲ್ಲಾ ವ್ಯವಹಾರ ಮಧ್ಯವರ್ತಿ ಧೀರಜ್ ಗುಪ್ತಾ ಎಂಬಾತನ ಮೂಲಕ ನಡೆದಿತ್ತು ಎನ್ನಲಾಗಿದೆ.

ಈ ಸಂಬಂಧ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಿಬಿಐ ಆರೋಪಿಗಳ ತನಿಖೆ ನಡೆಸುತ್ತಿದೆ.ಅಧಿಕಾರಿ ಗೋಪಾಲಕೃಷ್ಣ ಮಾಧವ್ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT