ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ಹಗರಣ: ಬೆಂಗಳೂರಿನ ಹಲವೆಡೆ ಸಿಬಿಐ ಶೋಧ

Last Updated 30 ಡಿಸೆಂಬರ್ 2019, 21:01 IST
ಅಕ್ಷರ ಗಾತ್ರ

ನವದೆಹಲಿ: ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ ಸಂಬಂಧ ಬೆಂಗಳೂರು ಸೇರಿದಂತೆ ಎಂಟು ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಸೋಮವಾರ ಶೋಧ ಕಾರ್ಯ ನಡೆಸಿದ್ದಾರೆ.

‘ಆಗಿನ ಆದಾಯ ತೆರಿಗೆ ಉಪ ಆಯುಕ್ತ ಸೌರಭ್‌ ನಾಯಕ್ (ತನಿಖೆ) ಹಾಗೂ ಸಹಾಯಕ ಆಯುಕ್ತ ಡಿ.ಕುಮಾರ್ ಅವರಿಗೆ ಸೇರಿದ ಎರಡು ಸ್ಥಳಗಳು ಸೇರಿದಂತೆ ಬೆಂಗಳೂರಿನಲ್ಲಿ ಐದು ಕಡೆಗಳಲ್ಲಿ ಶೋಧ ನಡೆಸಲಾಯಿತು’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

‘ನಾಯಕ್ ಹಾಗೂ ಕುಮಾರ್ ಇಬ್ಬರೂ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್‌ಗೆ ನೆರವು ನೀಡಿರುವ ಶಂಕೆ ಇದೆ. 2017ರಲ್ಲಿಯೇ ಇವರು ಐಎಂಎ ಕಚೇರಿಗಳಲ್ಲಿ ಶೋಧ ನಡೆಸಿ, ಲೆಕ್ಕಪತ್ರ ಪರಿಶೀಲಿಸಿದ್ದಾರೆ.

ದೊಡ್ಡ ಮೊತ್ತದ ನಗದು ಸ್ವೀಕರಿಸಿರುವುದು ಲೆಕ್ಕಪತ್ರ ದಾಖಲೆಗಳಲ್ಲಿ ಉಲ್ಲೇಖವಾಗಿದ್ದರೂ ಈ ಕುರಿತು ನಿರ್ಲಕ್ಷ ತೋರಿದ್ದಾರೆ. ಅಕ್ರಮ ಕುರಿತು ಕ್ರಮ ಕೈಗೊಂಡಿಲ್ಲ. ಇದಕ್ಕಾಗಿ ಅಧಿಕಾರಿಗಳಿಗೆ ಖಾನ್ ದೊಡ್ಡ ಮೊತ್ತದ ಲಂಚ ನೀಡಿರುವ ಸಂಶಯ ಇದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT