ಬೆಂಗಳೂರು:‘ಪಾಕಿಸ್ತಾನದಿಂದ ಹೊರಡುವ ಮೊದಲು ಭಾರತೀಯ ದೂತವಾಸ ಕಚೇರಿ ಆವರಣದಲ್ಲಿ ಉತ್ತಮ ಭವಿಷ್ಯಕ್ಕಾಗಿ ಗಿಡವೊಂದನ್ನು ನೆಟ್ಟೆ’ ಎಂದುಪಾಕಿಸ್ತಾನದಲ್ಲಿದ್ದ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಟ್ವೀಟ್ ಮಾಡಿದ್ದಾರೆ. ಎರಡೂ ದೇಶಗಳ 814 ಮಂದಿಅದನ್ನು ರಿಟ್ವೀಟ್ ಮಾಡಿಕೊಂಡಿದ್ದಾರೆ. 5,600 ಮಂದಿ ಲೈಕ್ ಮಾಡಿದ್ದಾರೆ.