ಕಟ್ಟಡದ ಹೊರ ಗೋಡೆಗಳಿಗೆ ಪ್ಲಾಸ್ಟರ್ ಮಾಡಲಾಗಿದೆ. ಜತೆಗೆ ಬಣ್ಣ ಬಳಿದು ಕಟ್ಟಡಕ್ಕೆ ಬಳಸಿದ ಅನುದಾನ, ನಿರ್ಮಿಸಿದ ಗುತ್ತಿಗೆದಾರ ಮತ್ತು ಉಸ್ತುವಾರಿ ಇಲಾಖೆಯ ವಿವರಣೆಯುಳ್ಳ ನಾಮಫಲಕ ಬರೆಯಲಾಗಿದೆ. ಕಟ್ಟಡದ ಒಳಗಡೆ ಪ್ಲಾಸ್ಟರ್ ಮತ್ತು ಬಣ್ಣ ಹಾಗೂ ನೆಲಹಾಸು ಕೈಗೊಳ್ಳಬೇಕಿದೆ. ಕಟ್ಟಡದ ಗುಣಮಟ್ಟವೂ ಸರಿಯಾಗಿಲ್ಲ ಎಂದು ದೂರುತ್ತಾರೆ ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ.